ನವದೆಹಲಿ: ‘ಕಡಲ ಪ್ರದೇಶಕ್ಕೆ ಸಂಬಂಧಿಸಿದ ಸದ್ಯದ ಸವಾಲುಗಳಿಗೆ ಸಮಾನ ಮನಸ್ಕ ದೇಶಗಳು ಒಟ್ಟುಸೇರಿ ವಿಷಯಾಧಾರಿತವಾಗಿ ಪರಿಹಾರ ಕಂಡುಕೊಳ್ಳಬೇಕು’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಶನಿವಾರ ಒತ್ತಿ ಹೇಳಿದರು.
ಪ್ರಾದೇಶಿಕ ಸಮಸ್ಯೆಗಳಿಗೆ ಪ್ರಾದೇಶಿಕವಾಗಿ ಪರಿಹಾರ ಕಂಡುಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನೂ ಈ ವೇಳೆ ಎತ್ತಿಹಿಡಿದರು.
ರೈಸಿನಾ ಡೈಲಾಗ್ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ಕಡಲ ಪ್ರದೇಶದ ನೀತಿಗಳು ಗೌರವ, ಪರಸ್ಪರ ಚರ್ಚೆ, ಶಾಂತಿ ಮತ್ತು ಸಮೃದ್ಧಿ ನೀತಿಯ ಮೇಲೆ ನಿಂತಿದೆ.
ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಸಾಗರ್ (ಪ್ರದೇಶದ ಎಲ್ಲರ ಭದ್ರತೆ ಮತ್ತು ಬೆಳವಣಿಗೆ) ಎಂಬ ದೂರದೃಷ್ಟಿಯಿಂದ ಪ್ರೇರೇಪಿತವಾಗಿದೆ ಎಂದು ಹೇಳಿದರು.