<p><strong>ಇಂಫಾಲ್/ಚುರಚಂದಪುರ:</strong> ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದ್ದ ಮಣಿಪುರದ ರಾಜಧಾನಿ ಇಂಫಾಲ್ನಿಂದ ಚುರಚಂದಪುರಕ್ಕೆ ತೆರಳುವ ಮಾರ್ಗದಲ್ಲಿ ‘ನೀವು ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ’ ಎಂಬ ಬರಹವಿರುವ ಡ್ರಾಪ್ ಬಾಕ್ಸ್ಗಳನ್ನು ಇಡಲಾಗಿದೆ.</p><p>ಗಲಭೆಯಿಂದ ತತ್ತರಿಸಿರುವ ಮಣಿಪುರದಲ್ಲಿ ಚುನಾವಣೆಯ ಕಾವು, ರ್ಯಾಲಿಗಳು, ಪೋಸ್ಟರ್ಗಳು ಯಾವುದೊಂದೂ ಕಾಣುತ್ತಿಲ್ಲ. ಬದಲಿಗೆ ಬೂದು ಬಣ್ಣದ ಗನ್ ಚಿತ್ರಗಳನ್ನು ಒಳಗೊಂಡ ಬಾಕ್ಸ್ಗಳನ್ನು ಕಾಣಬಹುದಾಗಿದೆ. ಇದು ಸಾಮಾನ್ಯ ಸ್ಥಿತಿಗೆ ಬರಲು ಯತ್ನಿಸುತ್ತಿರುವ ಮಣಿಪುರದ ಬೂದಿಮುಚ್ಚಿದ ಕೆಂಡದಂತಹ ಪರಿಸ್ಥಿತಿಗೆ ಸಾಕ್ಷಿಯಾಗಿದೆ.</p><p>ಮಣಿಪುರದ ಗಲಭೆ ವೇಳೆ ಭದ್ರತಾ ಪಡೆಗಳಿಂದ ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವಂತೆ ಸಂದೇಶ ಬರೆದಿರುವ ಡ್ರಾಪ್ ಬಾಕ್ಸ್ಗಳನ್ನು ರಾಜ್ಯದ ಹಲವೆಡೆ ಇಡಲಾಗಿದೆ.</p><p>ಮೂಲಗಳ ಪ್ರಕಾರ, ಸರ್ಕಾರಿ ಶಸ್ತ್ರಾಗಾರದಿಂದ ಗಲಭೆಕೋರರು 4,200ಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದು, ಅವು ಇನ್ನೂ ಪತ್ತೆಯಾಗಿಲ್ಲ.</p><p>ಜನಾಂಗೀಯ ಹಿಂಸಾಚಾರ ನಡೆದ ಮಣಿಪುರದಲ್ಲಿ ದುಷ್ಕರ್ಮಿಗಳು ಕದ್ದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲು ಶಸ್ತ್ರಾಸ್ತ್ರ ಹಿಂದಿರುಗಿಸುವಂತೆ ಸೂಚನೆ, ಅಲ್ಲಲ್ಲಿ ಡ್ರಾಪ್ ಬಾಕ್ಸ್ಗಳನ್ನು ಇಡುವುದು ಮತ್ತು ಭದ್ರಾತಾ ಪಡೆಗಳಿಂದ ಕೂಂಬಿಂಗ್ ಆಪರೇಶನ್ ಸಹ ನಡೆಸಲಾಗಿದೆ.</p><p>ಒಟ್ಟಾರೆ ಕಳುವಾಗಿದ್ದ ಸುಮಾರು 6,000 ಶಸ್ತ್ರಾಸ್ತ್ರಗಳ ಪೈಕಿ 1,800 ಅನ್ನು ಮಾತ್ರ ಈವರೆಗೆ ಹಿಂದಿರುಗಿಸಲಾಗಿದೆ. </p><p>ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಈಗಲೂ ಗಲಭೆಕೋರರ ವಶದಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ವಿವಿಧಿ ಸಮುದಾಯಗಳ ಮುಖಂಡರು, ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.</p><p>ಪೂರ್ವಇಂಫಾಲ್ನ ಬಿಜೆಪಿ ಶಾಸಕರ ಮನೆ ಬಳಿಯೂ ಒಂದು ಡ್ರಾಪ್ ಬಾಕ್ಸ್ ಇಡಲಾಗಿದೆ. </p><p>ವೆಪನ್ ಡ್ರಾಪ್ ಬಾಕ್ಸ್ನಲ್ಲಿರುವ ಪೋಸ್ಟರ್ನಲ್ಲಿ ‘ದಯವಿಟ್ಟು ನೀವು ಕಸಿದುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ’ ಎಂದು ಇಂಗ್ಲಿಷ್ ಮತ್ತು ಮೈತೇಯಿ ಭಾಷೆಯಲ್ಲಿ ಬರೆಯಲಾಗಿದೆ. ಯಾವುದೇ ಆತಂಕವಿಲ್ಲದೆ ಈ ಕಾರ್ಯವನ್ನು ಮಾಡಿ ಎಂದು ಟ್ಯಾಗ್ಲೈನ್ ನೀಡುವ ಮೂಲಕ ಶಸ್ತ್ರಾಸ್ತ್ರ ಕದ್ದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹಾಕುವುದಿಲ್ಲ ಎಂಬ ಸಂದೇಶ ನೀಡಲಾಗಿದೆ.</p><p>ಇಂಫಾಲ್ ಕಣಿವೆ ಮತ್ತು ಚುರಚಂದಪುರಕ್ಕೆ ಪಿಟಿಐ ವರದಿಗಾರರು ಭೇಟಿದಾಗ 3 ಪ್ರದೇಶಗಳಲ್ಲಿ ಈ ರೀತಿಯ ಡ್ರಾಪ್ ಬಾಕ್ಸ್ಗಳನ್ನು ಗುರುತಿಸಿದ್ದಾರೆ. ಕೆಲವು ಬಾಕ್ಸ್ಗಳ ಮೇಲೆ ಗನ್ ಚಿತ್ರಗಳಿದ್ದರೆ, ಮತ್ತೆ ಕೆಲವೆಡೆ ಖಾಲಿ ಇದೆ. ಕೆಲವೆಡೆ ಹಳ್ಳಿಗಳಲ್ಲಿ ಸ್ವಯಂಪ್ರೇರಿತರಾಗಿ ಕೆಲವರು ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸುತ್ತಿರುವುದೂ ಕಂಡುಬಂದಿದೆ.</p><p>ಚುನಾವಣೆಗೂ ಮುನ್ನ, ಪರವಾನಗಿ ಪಡೆದಿರುವ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.</p><p>ಎರಡು ಲೋಕಸಭಾ ಕ್ಷೇತ್ರಗಳಿರುವ ಮಣಿಪುರದಲ್ಲಿ ಏಪ್ರಿಲ್ 19 ಮತ್ತು 26ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ್/ಚುರಚಂದಪುರ:</strong> ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದ್ದ ಮಣಿಪುರದ ರಾಜಧಾನಿ ಇಂಫಾಲ್ನಿಂದ ಚುರಚಂದಪುರಕ್ಕೆ ತೆರಳುವ ಮಾರ್ಗದಲ್ಲಿ ‘ನೀವು ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ’ ಎಂಬ ಬರಹವಿರುವ ಡ್ರಾಪ್ ಬಾಕ್ಸ್ಗಳನ್ನು ಇಡಲಾಗಿದೆ.</p><p>ಗಲಭೆಯಿಂದ ತತ್ತರಿಸಿರುವ ಮಣಿಪುರದಲ್ಲಿ ಚುನಾವಣೆಯ ಕಾವು, ರ್ಯಾಲಿಗಳು, ಪೋಸ್ಟರ್ಗಳು ಯಾವುದೊಂದೂ ಕಾಣುತ್ತಿಲ್ಲ. ಬದಲಿಗೆ ಬೂದು ಬಣ್ಣದ ಗನ್ ಚಿತ್ರಗಳನ್ನು ಒಳಗೊಂಡ ಬಾಕ್ಸ್ಗಳನ್ನು ಕಾಣಬಹುದಾಗಿದೆ. ಇದು ಸಾಮಾನ್ಯ ಸ್ಥಿತಿಗೆ ಬರಲು ಯತ್ನಿಸುತ್ತಿರುವ ಮಣಿಪುರದ ಬೂದಿಮುಚ್ಚಿದ ಕೆಂಡದಂತಹ ಪರಿಸ್ಥಿತಿಗೆ ಸಾಕ್ಷಿಯಾಗಿದೆ.</p><p>ಮಣಿಪುರದ ಗಲಭೆ ವೇಳೆ ಭದ್ರತಾ ಪಡೆಗಳಿಂದ ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವಂತೆ ಸಂದೇಶ ಬರೆದಿರುವ ಡ್ರಾಪ್ ಬಾಕ್ಸ್ಗಳನ್ನು ರಾಜ್ಯದ ಹಲವೆಡೆ ಇಡಲಾಗಿದೆ.</p><p>ಮೂಲಗಳ ಪ್ರಕಾರ, ಸರ್ಕಾರಿ ಶಸ್ತ್ರಾಗಾರದಿಂದ ಗಲಭೆಕೋರರು 4,200ಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದು, ಅವು ಇನ್ನೂ ಪತ್ತೆಯಾಗಿಲ್ಲ.</p><p>ಜನಾಂಗೀಯ ಹಿಂಸಾಚಾರ ನಡೆದ ಮಣಿಪುರದಲ್ಲಿ ದುಷ್ಕರ್ಮಿಗಳು ಕದ್ದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲು ಶಸ್ತ್ರಾಸ್ತ್ರ ಹಿಂದಿರುಗಿಸುವಂತೆ ಸೂಚನೆ, ಅಲ್ಲಲ್ಲಿ ಡ್ರಾಪ್ ಬಾಕ್ಸ್ಗಳನ್ನು ಇಡುವುದು ಮತ್ತು ಭದ್ರಾತಾ ಪಡೆಗಳಿಂದ ಕೂಂಬಿಂಗ್ ಆಪರೇಶನ್ ಸಹ ನಡೆಸಲಾಗಿದೆ.</p><p>ಒಟ್ಟಾರೆ ಕಳುವಾಗಿದ್ದ ಸುಮಾರು 6,000 ಶಸ್ತ್ರಾಸ್ತ್ರಗಳ ಪೈಕಿ 1,800 ಅನ್ನು ಮಾತ್ರ ಈವರೆಗೆ ಹಿಂದಿರುಗಿಸಲಾಗಿದೆ. </p><p>ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಈಗಲೂ ಗಲಭೆಕೋರರ ವಶದಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ವಿವಿಧಿ ಸಮುದಾಯಗಳ ಮುಖಂಡರು, ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.</p><p>ಪೂರ್ವಇಂಫಾಲ್ನ ಬಿಜೆಪಿ ಶಾಸಕರ ಮನೆ ಬಳಿಯೂ ಒಂದು ಡ್ರಾಪ್ ಬಾಕ್ಸ್ ಇಡಲಾಗಿದೆ. </p><p>ವೆಪನ್ ಡ್ರಾಪ್ ಬಾಕ್ಸ್ನಲ್ಲಿರುವ ಪೋಸ್ಟರ್ನಲ್ಲಿ ‘ದಯವಿಟ್ಟು ನೀವು ಕಸಿದುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಇಲ್ಲಿ ಹಾಕಿ’ ಎಂದು ಇಂಗ್ಲಿಷ್ ಮತ್ತು ಮೈತೇಯಿ ಭಾಷೆಯಲ್ಲಿ ಬರೆಯಲಾಗಿದೆ. ಯಾವುದೇ ಆತಂಕವಿಲ್ಲದೆ ಈ ಕಾರ್ಯವನ್ನು ಮಾಡಿ ಎಂದು ಟ್ಯಾಗ್ಲೈನ್ ನೀಡುವ ಮೂಲಕ ಶಸ್ತ್ರಾಸ್ತ್ರ ಕದ್ದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹಾಕುವುದಿಲ್ಲ ಎಂಬ ಸಂದೇಶ ನೀಡಲಾಗಿದೆ.</p><p>ಇಂಫಾಲ್ ಕಣಿವೆ ಮತ್ತು ಚುರಚಂದಪುರಕ್ಕೆ ಪಿಟಿಐ ವರದಿಗಾರರು ಭೇಟಿದಾಗ 3 ಪ್ರದೇಶಗಳಲ್ಲಿ ಈ ರೀತಿಯ ಡ್ರಾಪ್ ಬಾಕ್ಸ್ಗಳನ್ನು ಗುರುತಿಸಿದ್ದಾರೆ. ಕೆಲವು ಬಾಕ್ಸ್ಗಳ ಮೇಲೆ ಗನ್ ಚಿತ್ರಗಳಿದ್ದರೆ, ಮತ್ತೆ ಕೆಲವೆಡೆ ಖಾಲಿ ಇದೆ. ಕೆಲವೆಡೆ ಹಳ್ಳಿಗಳಲ್ಲಿ ಸ್ವಯಂಪ್ರೇರಿತರಾಗಿ ಕೆಲವರು ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸುತ್ತಿರುವುದೂ ಕಂಡುಬಂದಿದೆ.</p><p>ಚುನಾವಣೆಗೂ ಮುನ್ನ, ಪರವಾನಗಿ ಪಡೆದಿರುವ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.</p><p>ಎರಡು ಲೋಕಸಭಾ ಕ್ಷೇತ್ರಗಳಿರುವ ಮಣಿಪುರದಲ್ಲಿ ಏಪ್ರಿಲ್ 19 ಮತ್ತು 26ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>