ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ (ಕಳೆದ ವಾರ ನಿವೃತ್ತರಾಗಿದ್ದಾರೆ) ಹಾಗೂ ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ನ್ಯಾಯಪೀಠ, ‘ಒಟ್ಟು ಸೀಟುಗಳಲ್ಲಿ ಶೇ 75ರಷ್ಟು ಸೀಟುಗಳನ್ನು ಸ್ಥಳೀಯರಿಗೆ ಮೀಸಲಿಡುವುದು ಅವೈಜ್ಞಾನಿಕ. ಇದು ಅಸಾಂವಿಧಾನಿಕ ನಡೆ ಎಂದು ಪ್ರದೀಪ್ ಜೈನ್ ಪ್ರಕರಣದಲ್ಲೇ (1984) ಸ್ಪಷ್ಟಪಡಿಸಲಾಗಿದೆ’ ಎಂದು ತಿಳಿಸಿತು.