ರಾಜ್ಯದ ಜನತೆಯನ್ನು ಕುರಿತು ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದ ಯೋಗಿ, ‘ತಮ್ಮ ಆಡಳಿತದ ಅವಧಿಯಲ್ಲಿ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯ ಜ್ಯೋತಿಯು ಎಲ್ಲರ ಹೃದಯದಲ್ಲಿ ಬೆಳಗಿತು. ಜನತೆ ‘ಸನಾತನ ಧರ್ಮ’(ಹಿಂದೂ ಧರ್ಮ)ವನ್ನು ಅನುಸರಿಸಿದರು. ಸಾಂಸ್ಕೃತಿಕ ರಾಷ್ಟ್ರೀಯತೆಯ ಜ್ಯೋತಿಯು ಸನಾತನ ಧರ್ಮವನ್ನು ನಂಬಿರುವ ಎಲ್ಲರ ಹೃದಯವನ್ನು ಸಂತೋಷಪಡಿಸಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.