ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ‘ಭ್ರಷ್ಟಾಚಾರವನ್ನು ನಾವು ತೊಡೆದುಹಾಕಬೇಕು ಎಂದು ಆಗಸ್ಟ್ 15ರ ಭಾಷಣದಲ್ಲಿ ಹೇಳಿದ್ದೀರಿ. ಸುಮಾರು 10 ವರ್ಷಗಳ ಕಳೆದವು. ಆಗಿದ್ದೇನು? ಅಚ್ಛೇ ದಿನ್ ಎಲ್ಲಿದೆ? ಮರೆತು ಹೋಯಿತೇ? ಆಮದಾಗಿದ್ದು ಹಣದುಬ್ಬರ, ನಮ್ಮ ತರಕಾರಿಗಳಲ್ಲ’ ಎಂದು ಹೇಳಿದ್ದಾರೆ.
‘ಮುಂದಿನ ಐದು ವರ್ಷ ಸುವರ್ಣಯುಗವಂತೆ. ಯಾರಿಗೆ? ಬಡವರಿಗಾ? ದಲಿತರಿಗಾ? ಅಲ್ಪಸಂಖ್ಯಾತರಿಗಾ?’ ಎಂದು ಸಿಬಲ್ ಪ್ರಶ್ನೆ ಮಾಡಿದ್ದಾರೆ.
ಯುಪಿಎ 1 ಹಾಗೂ 2ರ ಅವಧಿಯಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದ ಕಪಿಲ್ ಸಿಬಲ್, ಕಾಂಗ್ರೆಸ್ ತೊರೆದು ಸದ್ಯ ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ.