‘ಭಕ್ಷಿ ಅವರು, ಸೇನಾ ಪಡೆ ಸೇರಲು ಯುವಕರನ್ನು ಹುರಿದುಂಬಿಸುವ ‘ಸೇನಾ ಪಡೆ ಅಧಿಕಾರಿಗಳ ಪುನಶ್ಚೇತನ ಕಾರ್ಯಕ್ರಮ’ದ (ಎಎಫ್ಒಎಸ್ಒಪಿ) ನಿರ್ದೇಶಕ ಕರ್ನಲ್ ಗಣೇಶ್ ಬಾಬು ಅವರನ್ನು ಪರಿಚಯಿಸಿದರು. ಅವರಿಂದ ನನಗೆ ವಿವಿಧ ಪರೀಕ್ಷೆಗಳಿಗೆ ತಯಾರಿ, ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಕುರಿತು ಅಗತ್ಯ ಮಾಹಿತಿ, ಮಾರ್ಗದರ್ಶನ ದೊರಕಿತು’ ಎಂದು ಹಿಂದಿನದನ್ನು ನೆನಪಿಸಿಕೊಂಡಿದ್ದಾರೆ.