ಬೆಂಗಳೂರು: ಆದಾಯ ಮೂಲಕ್ಕಿಂತ ಸುಮಾರು 66ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಪರಪ್ಪನ ಅಗ್ರಾಹಾರದ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.
ಅವರೊಂದಿಗೆ ಜಯಾಲಲಿತಾ ಅವರ ಆಪ್ತ ಸ್ನೇಹಿತೆ ಶಶಿಕಲಾ ನಟರಾಜನ್ ಮತ್ತು ಜಯಾ ಅವರ ಸಾಕು ಮಗ ವಿ. ಸುಧಾಕರನ್ ಅವರು ಆಗಮಿಸಿದ್ದರು.
ಜಯಲಲಿತಾ ಅವರು ಮೂರನೇ ಬಾರಿ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದು, ಈ ಹಿಂದೆ ನಡೆದ ವಿಚಾರಣೆ ವೇಳೆಯಲ್ಲಿ ಅವರು 1,339 ಪ್ರಶ್ನೆಗಳಲ್ಲಿ 571 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದರು.
ಮಂಗಳವಾರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಬಾಕಿ ಉಳಿದ 768 ಪ್ರಶ್ನೆಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಈ ಪ್ರಶ್ನೆಗಳಿಗೆ ಜಯಾ ಅವರು ಇಂದು ಉತ್ತರಿಸಬೇಕಿದೆ.