<p><strong>ನಾಗಪುರ(ಪಿಟಿಐ): </strong>ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ತನಿಖಾ ವರದಿ ಹಾಗೂ ಈ ಸಂಬಂಧದ ‘ಕ್ರಮ ಕೈಗೊಂಡ ವರದಿ’ ಯನ್ನು (ಎಟಿಆರ್) ಮಹಾರಾಷ್ಟ್ರ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿತು.<br /> <br /> ಇಬ್ಬರು ಸದಸ್ಯರ ನ್ಯಾಯಾಂಗ ಆಯೋಗದ ವರದಿ ಹಾಗೂ ಎಟಿಆರ್ ಅನ್ನು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್್ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆ ದಿನ ಮಂಡಿಸಿದರು.<br /> <br /> ಆದರೆ, ನ್ಯಾಯಾಂಗ ಆಯೋಗದ ವರದಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ್ದ ಈ ಹಗರಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ರಾಜಕಾರಣಿಗಳು ಹಾಗೂ ನೌಕರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. <br /> <br /> ಹಗರಣದಲ್ಲಿ ದುರಾಸೆ, ಸ್ವಜನಪಕ್ಷ ಪಾತ, ಬೇಕಾದವರಿಗೆ ಒಲವು ತೋರಲಾಗಿದೆ ಎಂದು ಆಯೋಗ ಹೇಳಿದೆ. ಸೊಸೈಟಿಯ 102 ಸದಸ್ಯರಲ್ಲಿ 25 ಜನರು ಅನರ್ಹತೆ ಹೊಂದಿದ್ದಾರೆ ಹಾಗೂ 22 ಫ್ಲ್ಯಾಟ್ಗಳನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದೆ.<br /> <br /> ಆದರ್ಶ ಸೊಸೈಟಿಗೆ ಮಾಜಿ ಸಿ.ಎಂ ವಿಲಾಸ್ ರಾವ್ ದೇಶ್ ಮುಖ್್, ಅಶೋಕ್ ಚವಾಣ್, ಸುಶೀಲ್ ಕುಮಾರ್ ಶಿಂಧೆ, ಸಿ.ಎಂ ಪೃಥ್ವಿರಾಜ್ ಚವಾಣ್್ ಇತರರು ಪೋಷಕರಾಗಿದ್ದರು. ಆದರೆ, ಅಶೋಕ್ ಚವಾಣ್ ಅವರೊಬ್ಬರನ್ನೇ ಆರೋಪಟ್ಟಿಯಲ್ಲಿ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ(ಪಿಟಿಐ): </strong>ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ತನಿಖಾ ವರದಿ ಹಾಗೂ ಈ ಸಂಬಂಧದ ‘ಕ್ರಮ ಕೈಗೊಂಡ ವರದಿ’ ಯನ್ನು (ಎಟಿಆರ್) ಮಹಾರಾಷ್ಟ್ರ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿತು.<br /> <br /> ಇಬ್ಬರು ಸದಸ್ಯರ ನ್ಯಾಯಾಂಗ ಆಯೋಗದ ವರದಿ ಹಾಗೂ ಎಟಿಆರ್ ಅನ್ನು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್್ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆ ದಿನ ಮಂಡಿಸಿದರು.<br /> <br /> ಆದರೆ, ನ್ಯಾಯಾಂಗ ಆಯೋಗದ ವರದಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ್ದ ಈ ಹಗರಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ರಾಜಕಾರಣಿಗಳು ಹಾಗೂ ನೌಕರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. <br /> <br /> ಹಗರಣದಲ್ಲಿ ದುರಾಸೆ, ಸ್ವಜನಪಕ್ಷ ಪಾತ, ಬೇಕಾದವರಿಗೆ ಒಲವು ತೋರಲಾಗಿದೆ ಎಂದು ಆಯೋಗ ಹೇಳಿದೆ. ಸೊಸೈಟಿಯ 102 ಸದಸ್ಯರಲ್ಲಿ 25 ಜನರು ಅನರ್ಹತೆ ಹೊಂದಿದ್ದಾರೆ ಹಾಗೂ 22 ಫ್ಲ್ಯಾಟ್ಗಳನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದೆ.<br /> <br /> ಆದರ್ಶ ಸೊಸೈಟಿಗೆ ಮಾಜಿ ಸಿ.ಎಂ ವಿಲಾಸ್ ರಾವ್ ದೇಶ್ ಮುಖ್್, ಅಶೋಕ್ ಚವಾಣ್, ಸುಶೀಲ್ ಕುಮಾರ್ ಶಿಂಧೆ, ಸಿ.ಎಂ ಪೃಥ್ವಿರಾಜ್ ಚವಾಣ್್ ಇತರರು ಪೋಷಕರಾಗಿದ್ದರು. ಆದರೆ, ಅಶೋಕ್ ಚವಾಣ್ ಅವರೊಬ್ಬರನ್ನೇ ಆರೋಪಟ್ಟಿಯಲ್ಲಿ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>