ಪಿಎನ್ಬಿ ಹಗರಣಕ್ಕೆ ಸಂಬಂಧಿಸಿ ರಾಜ್ಯಸಭೆಯಲ್ಲಿ ನಿಲುವಳಿ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ. ರೊಟೊಮ್ಯಾಕ್ ಕಂಪನಿ, ದ್ವಾರಕಾದಾಸ್ ಸೇಠ್ ಜುವೆಲ್ಲರ್ಸ್ ಸೇರಿ ವಿವಿಧ ಆಭರಣ ವ್ಯಾಪಾರಿಗಳು ಬ್ಯಾಂಕುಗಳಿಗೆ ವಂಚನೆ ಮಾಡಿರುವ ವಿಚಾರವನ್ನೇ ಚರ್ಚೆಯ ಕೇಂದ್ರವಾಗಿಸಲು ವಿರೋಧ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ.