ಮುಂಬೈ (ಪಿಟಿಐ): ಆಮ್ ಆದ್ಮಿ ಪಕ್ಷದ ಆಂತರಿಕ ಕಚ್ಚಾಟಗಳು ತಾರಕಕ್ಕೇರಿದ ಬೆನ್ನಲ್ಲೆ ಹಿರಿಯ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಪಕ್ಷ ಬಿಟ್ಟು ಹೊರ ನಡೆದಿದ್ದಾರೆ.
‘ದೆಹಲಿಯಲ್ಲಿ ಶನಿವಾರ ಎಎಪಿ ಸಭೆಯಲ್ಲಿ ನಡೆದಿರುವ ಘಟನೆ ದುರದೃಷ್ಟಕರ’ ಎಂದು ಎಎಪಿ ತೊರೆದ ಬಳಿಕ ಸುದ್ದಿಗಾರರಿಗೆ ಪಾಟ್ಕರ್ ತಿಳಿಸಿದರು.
‘ಪಕ್ಷದಲ್ಲಿ ರಾಜಕೀಯ ತತ್ವಗಳನ್ನು ತುಳಿಯುತ್ತಿದ್ದಾರೆ. ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರೊಂದಿಗೆ ನಡೆದಿರುವ ಘಟನೆಗಳನ್ನು ನಾನು ಖಂಡಿಸುತ್ತೇನೆ’ ಎಂದು ನುಡಿದ ಪಾಟ್ಕರ್, ಎಎಪಿ ಕ್ಷೋಭೆಗೆ ಒಳಗಾಗಿದೆ ಎಂದು ಟೀಕಿಸಿದ್ದಾರೆ.