ಬೆಂಗಳೂರು : ನಾಟಕಕಾರ, ಕವಿ ಎಚ್.ಎಸ್. ಶಿವಪ್ರಕಾಶ್ ಅವರ `ಮಬ್ಬಿನ ಹಾಗೆ ಕಣಿವೆಯಲ್ಲಿ' ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2012ನೇ ಸಾಲಿನ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2008 ಮತ್ತು 2010ರ ನಡುವೆ ಪ್ರಥಮ ಮುದ್ರಣ ಕಂಡ ಕೃತಿಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಆರಿಫ್ ರಾಜಾ ಅವರ `ಜಂಗಮ ಫಕೀರನ ಜೋಳಿಗೆ' ಕವನ ಸಂಕಲನಕ್ಕೆ ಅಕಾಡೆಮಿಯ 2012ನೇ ಸಾಲಿನ `ಯುವ ಪುರಸ್ಕಾರ' ದೊರೆತಿದೆ. ಈ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.