ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಒಲವು: ಸವಾಲು

ಡಿಜಿಪಿಗಳ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌
Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ/ ಐಎಎನ್‌ಎಸ್): ಭಾರತದ ಕೆಲವು ಯುವಕರು ಐಎಸ್‌ ಉಗ್ರ ಸಂಘಟನೆಯತ್ತ  ಆಕರ್ಷಿತರಾಗುತ್ತಿರುವುದಕ್ಕೆ ಕೇಂದ್ರ ಗೃಹ ಸಚಿವ ರಾಜ­ನಾಥ್‌ ಸಿಂಗ್‌ ತೀವ್ರ ಆತಂಕ ವ್ಯಕ್ತಪಡಿಸಿದರು.

  ಶನಿವಾರ ಇಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇ­ಶ­ಗಳ ಉನ್ನತ ಪೊಲೀಸ್‌ ಅಧಿಕಾ­ರಿ­ಗಳ ೪೯ನೇ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬೆಳವಣಿಗೆಯನ್ನು ಹಗುರವಾಗಿ  ಪರಿ­ಗಣಿಸುವಂತಿಲ್ಲ ಎಂದರು.
ಐಎಸ್‌ ಸಂಘಟನೆ ಸಿರಿಯಾ ಹಾಗೂ ಇರಾಕ್‌ನಲ್ಲಿ ಹುಟ್ಟಿಕೊಂಡರೂ, ಭಾರತ ಉಪಖಂಡಕ್ಕೂ ಈ ಪಿಡುಗು ವ್ಯಾಪಿಸು­ತ್ತಿದೆ  ಎನ್ನುವುದನ್ನು ಅರ್ಥಮಾಡಿ­ಕೊಳ್ಳ­ಬೇಕು ಎಂದು ಹೇಳಿದರು.

ಸಿರಿಯಾದಲ್ಲಿ ಐಎಸ್‌ ಉಗ್ರರ ಪರ ಹೋರಾಡು­ವಾಗ ‘ಮೃತಪಟ್ಟಿದ್ದ’ ಎನ್ನುವ ವದಂತಿಗೆ ಕಾರಣನಾಗಿದ್ದ ಮುಂಬೈ ಯುವಕ ಆರೀಫ್‌

ಜಗತ್ತಿನಲ್ಲಿ ಅನೇಕ ಭಯೋ­ತ್ಪಾದಕ ಸಂಘಟನೆ­ಗಳು ಇರಬಹುದು. ಆದರೆ ಅವು ಭಾರತಕ್ಕೆ ಕಾಲಿಡಲು ನಾವು ಅವಕಾಶ ಮಾಡಿ­ಕೊಡುವುದಿಲ್ಲ
–ರಾಜನಾಥ್‌ ಸಿಂಗ್‌

ಮಜೀದ್‌ ವಾಪಸ್‌ ಬಂದ ಬೆನ್ನಲ್ಲಿಯೇ ಐಎಸ್‌ ಭಯೋತ್ಪಾದನೆಯ ಬಗ್ಗೆ ಮಾತನಾಡಿದ ಅವರು, ‘ಇದನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ’ ಎಂದು ಘೋಷಿಸಿದರು.

‘ಕಿರುಕುಳ ನೀಡುವ ಉದ್ದೇ­ಶದಿಂದ ಆರೀಫ್‌ನನ್ನು ಬಂಧಿ­ಸಿಲ್ಲ. ಇಂಥ ಎಲ್ಲ ಘಟನೆಗಳನ್ನು ಸವಿ­ಸ್ತಾರ­ವಾಗಿ ವಿಚಾರಣೆಗೊಳ­ಪಡಿಸಲಾ­ಗು­ತ್ತದೆ’ ಎಂದು ಸ್ಪಷ್ಟಪಡಿಸಿದರು.

ಪಾಕ್‌ ಕುಂಟುನೆಪ: -ಪಾಕ್‌ ಕೃಪಾ ಪೋಷಿತ ಭಯೋ­ತ್ಪಾದನೆಯು ಭಾರತ­ವನ್ನು ಅಸ್ಥಿರಗೊಳಿಸಲು ಯತ್ನಿಸು­ತ್ತಿದೆ ಎಂದು ಗಂಭೀರ ಆರೋಪ ಮಾಡಿದ  ರಾಜ­ನಾಥ್‌,  ನೆರೆದೇಶವು ‘ವಿವಿಧ ತಂತ್ರ’­ಗಳ ಮೂಲಕ ಭಾರತಕ್ಕೆ ಕೇಡು ಬಗೆ­ಯುವ ತನ್ನ ಪ್ರಯತ್ನ ಬಿಟ್ಟಿಲ್ಲ ಎಂದು ವಿಷಾದಿಸಿದರು.
‘ಭಾರತದಲ್ಲಿ ನಡೆಯುವ ವಿಧ್ವಂಸಕ ಚಟುವ­ಟಿಕೆಗೂ ತನಗೂ ಸಂಬಂಧವೇ  ಇಲ್ಲ. ಇದು ಹೊರ­ಗಿನವರ ಕೃತ್ಯ ಎನ್ನುವ ಕುಂಟುನೆಪ ಹೇಳುವುದನ್ನು ಪಾಕಿ­ಸ್ತಾನ ಬಿಟ್ಟಿಲ್ಲ. ಹಾಗಾದರೆ ಐಎಸ್‌ಐ ಪಾಕಿಸ್ತಾನಕ್ಕೆ ಸಂಬಂಧಿಸಿ­ಲ್ಲವೇ’ ಎಂದು ಪ್ರಶ್ನಿಸಿದರು.

‘ಜಮ್ಮು–ಕಾಶ್ಮೀರ ವಿಧಾನಸಭೆಗೆ ಇತ್ತೀ­ಚೆಗೆ ನಡೆದ ಮೊದಲ ಹಂತದ ಮತದಾನದಲ್ಲಿ ದಾಖಲೆ ಪ್ರಮಾಣ­ದಲ್ಲಿ ಜನ ತಮ್ಮ ಹಕ್ಕು ಚಲಾ­ಯಿಸಿ­ದ್ದಾರೆ. ರಾಜಕೀಯ ಸಭೆಗಳಲ್ಲಿಯಂತೂ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವ­ಹಿಸು­ತ್ತಿದ್ದಾರೆ. ಈ ಬೆಳವಣಿಗೆಯು ರಾಜ್ಯದ ವಸ್ತು­ಸ್ಥಿತಿಯ ಬಗ್ಗೆ ಭಯೋತ್ಪಾದಕ ಸಂಘ­ಟನೆಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ’ ಎಂದು ನುಡಿದರು.

ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ಅಕ್ಟೋಬರ್‌ ೨ರಂದು ಜಮಾತ್‌–ಉಲ್‌–ಮುಜಾಹಿದ್ದಿನ್‌ ಬಾಂಗ್ಲಾ­­ದೇಶ್‌ (ಜೆಎಂಬಿ) ಸಂಘಟನೆ ನಡೆಸಿದೆ ಎನ್ನಲಾದ ಸ್ಫೋಟವನ್ನು ಉಲ್ಲೇಖಿಸಿ, ವಿದೇಶಿ ಶಕ್ತಿಗಳು ತಮ್ಮ ಪಾತಕ ಕೃತ್ಯಗಳಿಗೆ ಭಾರತದ ನೆಲ­ವನ್ನು ಬಳಸಿ­ಕೊಳ್ಳುತ್ತಿವೆ ಎನ್ನುವುದು ಇದ­ರಿಂದ ಸಾಬೀತಾಗಿದೆ ಎಂದು ಹೇಳಿದರು.

‘ಭಾರತದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳ­ಬಹುದು ಎಂದು ವಿದೇಶಿ ಭಯೋತ್ಪಾದಕರು ಭಾವಿಸಿ­ದ್ದಾರೆ. ಆದರೆ ಭಾರತದ ಮುಸ್ಲಿಮರು ದೇಶದ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಹೋರಾಡಲು ಸದಾ ಸಿದ್ಧ’ ಎಂದು ಸಿಂಗ್‌ ಶ್ಲಾಘಿಸಿದರು.

ನಮನ: ಕರ್ತವ್ಯದಲ್ಲಿದ್ದಾಗ ಜೀವ ಕಳೆದುಕೊಂಡ ಎಲ್ಲ ಪೊಲೀಸ್‌ ಸಿಬ್ಬಂದಿಗೆ  ಗೌರವ ನಮನ ಸಲ್ಲಿಸಿ ದೆಹ­ಲಿಯಲ್ಲಿ ಪೊಲೀಸ್‌ ಸ್ಮಾರಕ ನಿರ್ಮಾ­ಣಕ್ಕೆ ₨ ೫೦ ಕೋಟಿ ಮಂಜೂರು ಮಾಡಿದರು.

ರಾಷ್ಟ್ರ ರಾಜಧಾನಿ ನವದೆಹಲಿ­ಯಿಂದ ಹೊರ­ಗಡೆ ಇದೇ ಪ್ರಥಮ ಬಾರಿಗೆ ನಡೆದ ಸಭೆಯಲ್ಲಿ ಎಲ್ಲ ರಾಜ್ಯ­ಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು, ಅರೆಸೇನಾ ಪಡೆ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈ ಸಮಾವೇಶದಲ್ಲಿ ಮಾತನಾಡುವರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT