<p><strong>ಭುವನೇಶ್ವರ: </strong> ಕಾಂಗ್ರೆಸ್ನ ಯುವ ಸಂಸದರೊಬ್ಬರು ಇಬ್ಬರು ಮಹಿಳೆಯರೊಂದಿಗೆ ಈಜುಕೊಳದಲ್ಲಿದ್ದ ಛಾಯಾಚಿತ್ರವೊಂದು ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಒಡಿಶಾದಲ್ಲಿ ವಿವಾದ ಸೃಷ್ಟಿಸಿದೆ.<br /> <br /> ಬುಡಕಟ್ಟು ಜನರ ಪ್ರಾಬಲ್ಯವಿರುವ ನೌರಂಗ್ಪುರ ಜಿಲ್ಲೆಯ ಸಂಸತ್ ಸದಸ್ಯ ಪ್ರದೀಪ್ ಮಝಿ ಅವರು ಈಗಾಗಲೇ ಛಾಯಾಚಿತ್ರ ಪ್ರಕಟಿಸಿರುವ ದಿನ ಪತ್ರಿಕೆಯ ಸಂಪಾದಕರ ವಿರುದ್ಧ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಪ್ರಕಟಿಸಿರುವ ಮತ್ತೊಬ್ಬರ ವಿರುದ್ಧ ನವದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.<br /> <br /> `ಛಾಯಾಚಿತ್ರ ನನ್ನದಲ್ಲ. ಇದು ನಕಲಿಯಾಗಿದ್ದು, ತಿದ್ದಲಾಗಿದೆ. ಚುನಾವಣೆ ಇನ್ನೇನು ಹತ್ತಿರದಲ್ಲಿರುವಾಗ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಇದನ್ನು ಎಲ್ಲಾ ಕಡೆ ಹಂಚಲಾಗಿದೆ' ಎಂದು ಮಝಿ ಆರೋಪಿಸಿದ್ದಾರೆ.<br /> <br /> `ಸಂಸದರ ವರ್ಚಸ್ಸಿಗೆ ಹಾನಿ ಮಾಡಲು ಚಿತ್ರವನ್ನು ನಾವು ಪ್ರಕಟಿಸಿಲ್ಲ. ಈಗಾಗಲೇ ಹಲವು ಕಡೆಗಳಲ್ಲಿ ಈ ಚಿತ್ರ ಕಂಡು ಬಂದಿತ್ತು. ಯುವ ಸಂಸದರನ್ನು ಈ ಛಾಯಾಚಿತ್ರವು ಬಿಕ್ಕಟ್ಟಿಗೆ ಸಿಲುಕಿಸಬಹುದು ಎಂದಷ್ಟೇ ನಾವು ಬರೆದಿದ್ದೇವೆ' ಎಂದು ಸ್ಥಳೀಯ ಪತ್ರಿಕೆಯೊಂದರ ಸಂಪಾದಕ ನವೀನ್ ದಾಸ್ ಹೇಳಿದ್ದಾರೆ.<br /> <br /> ಪ್ರಕರಣದ ಹಿನ್ನೆಲೆಯಲ್ಲಿ ಸಂಸತ್ ಸದಸ್ಯತ್ವಕ್ಕೆ ಮಝಿ ರಾಜೀನಾಮೆ ನೀಡಬೇಕು ಎಂದು ಆಡಳಿತಾರೂಢ ಬಿಜೆಡಿ ಒತ್ತಾಯಿಸಿದೆ. ಆದರೆ, ಕಾಂಗ್ರೆಸ್ನ ಇತರ ಸಂಸದರು ಮಝಿ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ: </strong> ಕಾಂಗ್ರೆಸ್ನ ಯುವ ಸಂಸದರೊಬ್ಬರು ಇಬ್ಬರು ಮಹಿಳೆಯರೊಂದಿಗೆ ಈಜುಕೊಳದಲ್ಲಿದ್ದ ಛಾಯಾಚಿತ್ರವೊಂದು ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಒಡಿಶಾದಲ್ಲಿ ವಿವಾದ ಸೃಷ್ಟಿಸಿದೆ.<br /> <br /> ಬುಡಕಟ್ಟು ಜನರ ಪ್ರಾಬಲ್ಯವಿರುವ ನೌರಂಗ್ಪುರ ಜಿಲ್ಲೆಯ ಸಂಸತ್ ಸದಸ್ಯ ಪ್ರದೀಪ್ ಮಝಿ ಅವರು ಈಗಾಗಲೇ ಛಾಯಾಚಿತ್ರ ಪ್ರಕಟಿಸಿರುವ ದಿನ ಪತ್ರಿಕೆಯ ಸಂಪಾದಕರ ವಿರುದ್ಧ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಪ್ರಕಟಿಸಿರುವ ಮತ್ತೊಬ್ಬರ ವಿರುದ್ಧ ನವದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.<br /> <br /> `ಛಾಯಾಚಿತ್ರ ನನ್ನದಲ್ಲ. ಇದು ನಕಲಿಯಾಗಿದ್ದು, ತಿದ್ದಲಾಗಿದೆ. ಚುನಾವಣೆ ಇನ್ನೇನು ಹತ್ತಿರದಲ್ಲಿರುವಾಗ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಇದನ್ನು ಎಲ್ಲಾ ಕಡೆ ಹಂಚಲಾಗಿದೆ' ಎಂದು ಮಝಿ ಆರೋಪಿಸಿದ್ದಾರೆ.<br /> <br /> `ಸಂಸದರ ವರ್ಚಸ್ಸಿಗೆ ಹಾನಿ ಮಾಡಲು ಚಿತ್ರವನ್ನು ನಾವು ಪ್ರಕಟಿಸಿಲ್ಲ. ಈಗಾಗಲೇ ಹಲವು ಕಡೆಗಳಲ್ಲಿ ಈ ಚಿತ್ರ ಕಂಡು ಬಂದಿತ್ತು. ಯುವ ಸಂಸದರನ್ನು ಈ ಛಾಯಾಚಿತ್ರವು ಬಿಕ್ಕಟ್ಟಿಗೆ ಸಿಲುಕಿಸಬಹುದು ಎಂದಷ್ಟೇ ನಾವು ಬರೆದಿದ್ದೇವೆ' ಎಂದು ಸ್ಥಳೀಯ ಪತ್ರಿಕೆಯೊಂದರ ಸಂಪಾದಕ ನವೀನ್ ದಾಸ್ ಹೇಳಿದ್ದಾರೆ.<br /> <br /> ಪ್ರಕರಣದ ಹಿನ್ನೆಲೆಯಲ್ಲಿ ಸಂಸತ್ ಸದಸ್ಯತ್ವಕ್ಕೆ ಮಝಿ ರಾಜೀನಾಮೆ ನೀಡಬೇಕು ಎಂದು ಆಡಳಿತಾರೂಢ ಬಿಜೆಡಿ ಒತ್ತಾಯಿಸಿದೆ. ಆದರೆ, ಕಾಂಗ್ರೆಸ್ನ ಇತರ ಸಂಸದರು ಮಝಿ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>