ಸರ್ಕಾರವು ಕಪ್ಪುಹಣವನ್ನು ವಾಪಸ್ ತರಲು ‘ಸರಿಯಾದ ದಿಕ್ಕಿನಲ್ಲೇ’ ಪ್ರಯತ್ನ ನಡೆಸುತ್ತಿದೆ ಎಂದು ಸಮರ್ಥಿಸಿಕೊಂಡರು.
ರೇಡಿಯೋದಲ್ಲಿ ತಾವು ಆರಂಭಿಸಿರುವ ‘ಮನ್ ಕಿ ಬಾತ್’ (ಮನದ ಮಾತು) ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ವಿದೇಶಗಳಲ್ಲಿ ಇರುವ ಕಪ್ಪುಹಣ ವಾಪಸ್ ತರುವ ವಿಷಯವು ನನ್ನ ಪಾಲಿಗೆ ನಂಬಿಕೆಯ ಕಟ್ಟಳೆಯಾಗಿದೆ. ಇದನ್ನು ಸಾಧ್ಯವಾಗಿಸಲು ಯಾವ ಲೋಪವೂ ಇಲ್ಲದಂತೆ ಪರಿಶ್ರಮ ಹಾಕುತ್ತೇನೆ’ ಎಂದರು.