ಇದರ ನಡುವೆ ರೈಲು ಟಿಕೆಟ್ ಪರೀಕ್ಷಕರು(ಟಿಟಿಇ) ಸಹ ಆಗಮಿಸಿದ್ದರು. ಅವರಿಗೂ ಸಮಸ್ಯೆ ವಿವರಿಸಲಾಗಿತ್ತು. ಆದರೆ ವಿವೇಕ್ ಅವರಿಗೆ ನಿಂತುಕೊಂಡೇ ಪ್ರಯಣಿಸುವಂತೆ ಟಿಟಿಇ ಸೂಚಿಸಿದ್ದರು. ಇದರಿಂದ ಬೇಸರಗೊಂಡ ವಿವೇಕ್, ತಮಗಾದ ತೊಂದರೆಗೆ ₹20 ಲಕ್ಷ ಪರಿಹಾರ ದೊರಕಿಸಿಕೊಡುವಂತೆ ಗ್ರಾಹಕ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದರು. ನಾಲ್ಕು ವರ್ಷಗಳ ವಿಚಾರಣೆ ಬಳಿಕ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ.