ಪನ್ನಿವಾಲಾ ಫಟ್ಟಾ: ‘ಚುನಾವಣೆಯ ಹೊತ್ತಿನಲ್ಲಿ ರಾಜಕೀಯ ಟೀಕೆಗಳು ಕೆಳಮಟ್ಟ ತಲುಪುತ್ತಿವೆ’ ಎಂದು ಶಿರೋಮಣಿ ಅಕಾಲಿದಳ (ಎಸ್ಎಡಿ) ಅಧ್ಯಕ್ಷ ಸುಖ್ಬೀರ್ ಬಾದಲ್ ವಿಷಾದಿಸಿದ್ದಾರೆ. ಎಸ್ಎಡಿ, ಬಿಜೆಪಿಯ ಹಳೆಯ ಮೈತ್ರಿ ಪಕ್ಷಗಳಲ್ಲಿ ಒಂದಾಗಿದೆ. ನರೇಂದ್ರ ಮೋದಿ ಅವರು ಪ್ರಬಲ ನಾಯಕ, ಚುನಾವಣೆಯ ಬಳಿಕ ಎನ್ಡಿಎಗೆ ಅವರಲ್ಲದೆ ಬೇರೆ ಆಯ್ಕೆಯೇ ಇಲ್ಲ ಎಂದೂ ಸುಖ್ಬೀರ್ ಹೇಳಿದ್ದಾರೆ.