ಮುಂಬೈ: ಕೊಂಕಣಿ ಕವಯಿತ್ರಿ ಶೀಲಾ ಕಂಭದಕೋಣೆ (79) ಇತ್ತೀಚೆಗೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು. ಪತಿ ಕೇಶವರಾವ್, ಮಗ ಅನಿಲ್ರಾವ್ ಇದ್ದಾರೆ.
ಕುಂದಾಪುರ ಸಮೀಪದ ಕಂಭದಕೋಣೆ ಮೂಲದ ಶೀಲಾ ಅವರಿಗೆ ಮಕ್ಕಳ ಕವಿತೆಯಲ್ಲಿ ವಿಶೇಷ ಆಸಕ್ತಿ ಇತ್ತು. ಮುಂಬೈ ಆಕಾಶವಾಣಿಯಲ್ಲಿ ಅವರ ಕವಿತೆಗಳು ಪ್ರಸಾರವಾಗಿವೆ. ಶೀಲಾ ಎರಡು ಕೊಂಕಣಿ ನಾಟಕಗಳನ್ನೂ ರಚಿಸಿದ್ದಾರೆ. `ಕೀಸೊ ಭರ್ನು ಹಾಸೊ~ ಅವರ ಪ್ರಾತಿನಿಧಿಕ ಕವಿತೆಗಳ ಸಂಕಲನ.