ಸಿಐಸಿ ಅದೇಶದ ವಿರುದ್ಧ 8ನೇ ಆಗಸ್ಟ್ 2006ರಂದು ಕೇಂದ್ರ ಸರ್ಕಾರ ಹೂಡಿದ್ದ ಧಾವೆಯನ್ನು ನ್ಯಾ. ಅನಿಲ್ ಕುಮಾರ್ ಎತ್ತಿ ಹಿಡಿದರು. 2002ರ ಫೆ 28ರಿಂದ ಮಾರ್ಚ್ 15ರವರೆಗೆ ನಾರಾಯಣನ್ ಅವರಿಗೆ ವಾಜಿಪೇಯಿ ಅವರು ಬರೆದ ಅಷ್ಟೂ ಪತ್ರಗಳನ್ನು ಬಹಿರಂಗ ಪಡೆಸಬೇಕೆಂದು ಸಿಐಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಿ.ರಮೇಶ್ ಅವರ ಮೂಲಕ ಕೋರಿತ್ತು.
~ಅಧ್ಯಕ್ಷ ಹಾಗೂ ಪ್ರಧಾನಿ ನಡುವಿನ ಪತ್ರ ವ್ಯವಹಾರವನ್ನು ಬಹಿರಂಗಪಡಿಸಲು ಅರ್ಜಿದಾರ (ಸರ್ಕಾರ)ರಿಗೆ ಸೂಚಿಸಲು ಸಿಐಸಿಗೆ ಯಾವುದೇ ಅಧಿಕಾರವಿಲ್ಲ~ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.