<p><strong><br /> ಅಹಮದಾಬಾದ್ (ಪಿಟಿಐ):</strong> 59 ಜನ ಸಜೀವ ದಹನಗೊಂಡ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತ್ವರಿತ ನ್ಯಾಯಾಲಯವು 31 ಮಂದಿಯನ್ನು ತಪ್ಪಿತಸ್ಥರು ಎಂದು ಮಂಗಳವಾರ ತೀರ್ಪು ನೀಡಿದೆ.<br /> <br /> ಪ್ರಮುಖ ಆರೋಪಿಗಳಾಗಿದ್ದ ಮೌಲ್ವಿ ಸಯೀದ್ ಉಮರಜಿ, ಗೋಧ್ರಾ ನಗರಸಭೆ ಅಧ್ಯಕ್ಷ ಮೊಹಮದ್ ಅಬ್ದುಲ್ ರಹೀಮ್ ಕಲೋಟಾ, ನನ್ನು ಮಿಯಾ ಚೌಧರಿ, ಮೊಹಮದ್ ಅನ್ಸಾರಿ ಸೇರಿದಂತೆ 63 ಜನರನ್ನು ದೋಷಮುಕ್ತರು ಎಂದು ಪ್ರಕಟಿಸಿದೆ.<br /> <br /> ತಪ್ಪಿತಸ್ಥರ ಶಿಕ್ಷೆಯ ಪ್ರಮಾಣವನ್ನು ಈ ತಿಂಗಳ 25ರಂದು ಪ್ರಕಟಿಸಲಾಗುವುದು ಎಂದು ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್.ಪಟೇಲ್ ತಿಳಿಸಿದ್ದಾರೆ.<br /> <br /> 2002ರ ಫೆ. 27ರಂದು ಅಯೋಧ್ಯೆಯಿಂದ ಕರಸೇವೆ ಮುಗಿಸಿಕೊಂಡು ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ವಾಪಸಾಗುತ್ತಿದ್ದ 59 ಕರಸೇವಕರು ಗೋಧ್ರಾ ಬಳಿ ಸಜೀವ ದಹನಗೊಂಡಿದ್ದರು. ಈ ಹತ್ಯಾಕಾಂಡದ ನಂತರ ಗುಜರಾತ್ನ ವಿವಿಧ ಕಡೆಗಳಲ್ಲಿ ನಡೆದ ಕೋಮು ಗಲಭೆಗಳಲ್ಲಿ 1200 ಜನ ಪ್ರಾಣ ಕಳೆದುಕೊಂಡಿದ್ದರು.<br /> <br /> ಪೂರ್ವಯೋಜಿತ ಸಂಚಿನಂತೆ ಸಬರಮತಿ ಎಕ್ಸ್ಪ್ರೆಸ್ಗೆ ಬೆಂಕಿ ಹಚ್ಚಲಾಗಿತ್ತು ಎಂಬ ಪ್ರಾಸಿಕ್ಯೂಷನ್ ವಾದವನ್ನು ಒಪ್ಪಿಕೊಂಡ ನ್ಯಾಯಾಧೀಶರು, ಪ್ರಮುಖ ಆರೋಪಿಗಳಾದ ಹಾಜಿ ಬಿಲ್ಲಾ ಮತ್ತು ರಜಾಕ್ ಕುರ್ಕುರ್ ಮತ್ತಿತರರನ್ನು ತಪ್ಪಿತಸ್ಥರು ಎಂದು ಘೋಷಿಸಿದರು.<br /> <br /> ವೈಜ್ಞಾನಿಕ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ಸಾಂದರ್ಭಿಕ ಸಾಕ್ಷಿಗಳು ಮತ್ತು ಲಭ್ಯ ದಾಖಲೆಗಳ ಆಧಾರದ ಮೇಲೆ ನ್ಯಾಯಾಧೀಶರು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಜೆ.ಎಂ.ಪಂಚಾಲ್ ತಿಳಿಸಿದ್ದಾರೆ.<br /> <br /> <strong>ಬಿಗಿ ಬಂದೋಬಸ್ತ್</strong><br /> ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಬಿಗಿ ಬಂದೋಬಸ್ತ್ನಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. 2009ರ ಜೂನ್ನಲ್ಲಿ 94 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸುವುದರೊಂದಿಗೆ ಪ್ರಕರಣದ ವಿಚಾರಣೆ ಆರಂಭವಾಗಿತ್ತು.<br /> <br /> ಕೊಲೆ ಮಾಡುವ ಕ್ರಿಮಿನಲ್ ಸಂಚಿನ ಉದ್ದೇಶದಿಂದಲೇ ಗೋಧ್ರಾ ರೈಲು ನಿಲ್ದಾಣದ ಬಳಿ ಸುಮಾರು ಒಂದು ಸಾವಿರ ಜನ ಸೇರಿಕೊಂಡು ರೈಲಿನ ಮೇಲೆ ದಾಳಿ ನಡೆಸಿ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರು ಎಂದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.<br /> <br /> <strong>ಬಿಜೆಪಿ ಸ್ವಾಗತ</strong> <br /> ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಇಡೀ ಘಟನೆಯನ್ನು ತಿರುಚುವ ಯುಪಿಎ ಸರ್ಕಾರದ ದುರುದ್ದೇಶ ಬಹಿರಂಗಗೊಂಡಿದೆ ಎಂದು ವಕ್ತಾರ ರವಿಶಂಕರ್ ಪ್ರಸಾದ್ ಸಂಸತ್ ಭವನದ ಎದುರು ಸುದ್ದಿಗಾರರಿಗೆ ಹೇಳಿದ್ದಾರೆ.<br /> <br /> ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲೇ ಬೆಂಕಿ ಆಕಸ್ಮಿಕ ಸಂಭವಿಸಿತ್ತು ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ಸಮಿತಿಯು ವರದಿ ನೀಡಿದ್ದುದನ್ನು ಪ್ರಸಾದ್ ಟೀಕಿಸಿದರು. ಲಾಲೂ ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಬ್ಯಾನರ್ಜಿ ಸಮಿತಿಯನ್ನು ನೇಮಿಸಲಾಗಿತ್ತು.<br /> <br /> ಬಿಜೆಪಿಯ ಇನ್ನೊಬ್ಬ ವಕ್ತಾರ ತರುಣ್ ವಿಜಯ್ ಅವರೂ ಯುಪಿಎ ಸರ್ಕಾರದ ದುರುದ್ದೇಶ ಈ ತೀರ್ಪಿನಿಂದ ಬಯಲಾಗಿದೆ ಎಂದು ಟೀಕಿಸಿದ್ದಾರೆ.<br /> <br /> <strong>ನಗೆಪಾಟಲು- ಪ್ರಶಾಂತ್</strong><br /> ನವದೆಹಲಿ (ಐಎಎನ್ಎಸ್): ಗೋಧ್ರಾ ಪ್ರಕರಣದ ತೀರ್ಪಿನಲ್ಲಿ 63 ಪ್ರಮುಖ ಆರೋಪಿಗಳನ್ನು ದೋಷಮುಕ್ತರನ್ನಾಗಿ ಮಾಡಿರುವುದು ನ್ಯಾಯಾಂಗವನ್ನು ನಗೆಪಾಟಲಿಗೆ ಈಡು ಮಾಡಿದೆ ಎಂದು ಸುಪ್ರೀಂಕೋರ್ಟ್ನ ವಕೀಲ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ.<br /> <br /> ದೋಷಮುಕ್ತರು ಎಂದು ಪ್ರಕಟಿಸಿರುವ 63 ಜನರಲ್ಲಿ ಬಹುತೇಕರಿಗೆ ಜಾಮೀನು ಸಿಕ್ಕಿಲ್ಲ. ಅವರೆಲ್ಲರೂ ಜೈಲಿನಲ್ಲಿಯೇ ಇದ್ದಾರೆ. ಆದರೂ ಅವರೆಲ್ಲರನ್ನೂ ದೋಷಮುಕ್ತರು ಎಂದು ಪ್ರಕಟಿಸಿರುವುದು ಅಚ್ಚರಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.<br /> <br /> <strong>49 ಮಂದಿ ಮನೆಗೆ<br /> </strong>ಗೋದ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿ ಸಬರಮತಿ ಕಾರಾಗೃಹದಲ್ಲಿ ವಿಚಾರಣಾಧೀನ ಇರಿಸಲಾಗಿದ್ದ 49 ಮಂದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><br /> ಅಹಮದಾಬಾದ್ (ಪಿಟಿಐ):</strong> 59 ಜನ ಸಜೀವ ದಹನಗೊಂಡ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತ್ವರಿತ ನ್ಯಾಯಾಲಯವು 31 ಮಂದಿಯನ್ನು ತಪ್ಪಿತಸ್ಥರು ಎಂದು ಮಂಗಳವಾರ ತೀರ್ಪು ನೀಡಿದೆ.<br /> <br /> ಪ್ರಮುಖ ಆರೋಪಿಗಳಾಗಿದ್ದ ಮೌಲ್ವಿ ಸಯೀದ್ ಉಮರಜಿ, ಗೋಧ್ರಾ ನಗರಸಭೆ ಅಧ್ಯಕ್ಷ ಮೊಹಮದ್ ಅಬ್ದುಲ್ ರಹೀಮ್ ಕಲೋಟಾ, ನನ್ನು ಮಿಯಾ ಚೌಧರಿ, ಮೊಹಮದ್ ಅನ್ಸಾರಿ ಸೇರಿದಂತೆ 63 ಜನರನ್ನು ದೋಷಮುಕ್ತರು ಎಂದು ಪ್ರಕಟಿಸಿದೆ.<br /> <br /> ತಪ್ಪಿತಸ್ಥರ ಶಿಕ್ಷೆಯ ಪ್ರಮಾಣವನ್ನು ಈ ತಿಂಗಳ 25ರಂದು ಪ್ರಕಟಿಸಲಾಗುವುದು ಎಂದು ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್.ಪಟೇಲ್ ತಿಳಿಸಿದ್ದಾರೆ.<br /> <br /> 2002ರ ಫೆ. 27ರಂದು ಅಯೋಧ್ಯೆಯಿಂದ ಕರಸೇವೆ ಮುಗಿಸಿಕೊಂಡು ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ವಾಪಸಾಗುತ್ತಿದ್ದ 59 ಕರಸೇವಕರು ಗೋಧ್ರಾ ಬಳಿ ಸಜೀವ ದಹನಗೊಂಡಿದ್ದರು. ಈ ಹತ್ಯಾಕಾಂಡದ ನಂತರ ಗುಜರಾತ್ನ ವಿವಿಧ ಕಡೆಗಳಲ್ಲಿ ನಡೆದ ಕೋಮು ಗಲಭೆಗಳಲ್ಲಿ 1200 ಜನ ಪ್ರಾಣ ಕಳೆದುಕೊಂಡಿದ್ದರು.<br /> <br /> ಪೂರ್ವಯೋಜಿತ ಸಂಚಿನಂತೆ ಸಬರಮತಿ ಎಕ್ಸ್ಪ್ರೆಸ್ಗೆ ಬೆಂಕಿ ಹಚ್ಚಲಾಗಿತ್ತು ಎಂಬ ಪ್ರಾಸಿಕ್ಯೂಷನ್ ವಾದವನ್ನು ಒಪ್ಪಿಕೊಂಡ ನ್ಯಾಯಾಧೀಶರು, ಪ್ರಮುಖ ಆರೋಪಿಗಳಾದ ಹಾಜಿ ಬಿಲ್ಲಾ ಮತ್ತು ರಜಾಕ್ ಕುರ್ಕುರ್ ಮತ್ತಿತರರನ್ನು ತಪ್ಪಿತಸ್ಥರು ಎಂದು ಘೋಷಿಸಿದರು.<br /> <br /> ವೈಜ್ಞಾನಿಕ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ಸಾಂದರ್ಭಿಕ ಸಾಕ್ಷಿಗಳು ಮತ್ತು ಲಭ್ಯ ದಾಖಲೆಗಳ ಆಧಾರದ ಮೇಲೆ ನ್ಯಾಯಾಧೀಶರು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಜೆ.ಎಂ.ಪಂಚಾಲ್ ತಿಳಿಸಿದ್ದಾರೆ.<br /> <br /> <strong>ಬಿಗಿ ಬಂದೋಬಸ್ತ್</strong><br /> ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಬಿಗಿ ಬಂದೋಬಸ್ತ್ನಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. 2009ರ ಜೂನ್ನಲ್ಲಿ 94 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸುವುದರೊಂದಿಗೆ ಪ್ರಕರಣದ ವಿಚಾರಣೆ ಆರಂಭವಾಗಿತ್ತು.<br /> <br /> ಕೊಲೆ ಮಾಡುವ ಕ್ರಿಮಿನಲ್ ಸಂಚಿನ ಉದ್ದೇಶದಿಂದಲೇ ಗೋಧ್ರಾ ರೈಲು ನಿಲ್ದಾಣದ ಬಳಿ ಸುಮಾರು ಒಂದು ಸಾವಿರ ಜನ ಸೇರಿಕೊಂಡು ರೈಲಿನ ಮೇಲೆ ದಾಳಿ ನಡೆಸಿ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರು ಎಂದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.<br /> <br /> <strong>ಬಿಜೆಪಿ ಸ್ವಾಗತ</strong> <br /> ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಇಡೀ ಘಟನೆಯನ್ನು ತಿರುಚುವ ಯುಪಿಎ ಸರ್ಕಾರದ ದುರುದ್ದೇಶ ಬಹಿರಂಗಗೊಂಡಿದೆ ಎಂದು ವಕ್ತಾರ ರವಿಶಂಕರ್ ಪ್ರಸಾದ್ ಸಂಸತ್ ಭವನದ ಎದುರು ಸುದ್ದಿಗಾರರಿಗೆ ಹೇಳಿದ್ದಾರೆ.<br /> <br /> ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲೇ ಬೆಂಕಿ ಆಕಸ್ಮಿಕ ಸಂಭವಿಸಿತ್ತು ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ಸಮಿತಿಯು ವರದಿ ನೀಡಿದ್ದುದನ್ನು ಪ್ರಸಾದ್ ಟೀಕಿಸಿದರು. ಲಾಲೂ ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಬ್ಯಾನರ್ಜಿ ಸಮಿತಿಯನ್ನು ನೇಮಿಸಲಾಗಿತ್ತು.<br /> <br /> ಬಿಜೆಪಿಯ ಇನ್ನೊಬ್ಬ ವಕ್ತಾರ ತರುಣ್ ವಿಜಯ್ ಅವರೂ ಯುಪಿಎ ಸರ್ಕಾರದ ದುರುದ್ದೇಶ ಈ ತೀರ್ಪಿನಿಂದ ಬಯಲಾಗಿದೆ ಎಂದು ಟೀಕಿಸಿದ್ದಾರೆ.<br /> <br /> <strong>ನಗೆಪಾಟಲು- ಪ್ರಶಾಂತ್</strong><br /> ನವದೆಹಲಿ (ಐಎಎನ್ಎಸ್): ಗೋಧ್ರಾ ಪ್ರಕರಣದ ತೀರ್ಪಿನಲ್ಲಿ 63 ಪ್ರಮುಖ ಆರೋಪಿಗಳನ್ನು ದೋಷಮುಕ್ತರನ್ನಾಗಿ ಮಾಡಿರುವುದು ನ್ಯಾಯಾಂಗವನ್ನು ನಗೆಪಾಟಲಿಗೆ ಈಡು ಮಾಡಿದೆ ಎಂದು ಸುಪ್ರೀಂಕೋರ್ಟ್ನ ವಕೀಲ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ.<br /> <br /> ದೋಷಮುಕ್ತರು ಎಂದು ಪ್ರಕಟಿಸಿರುವ 63 ಜನರಲ್ಲಿ ಬಹುತೇಕರಿಗೆ ಜಾಮೀನು ಸಿಕ್ಕಿಲ್ಲ. ಅವರೆಲ್ಲರೂ ಜೈಲಿನಲ್ಲಿಯೇ ಇದ್ದಾರೆ. ಆದರೂ ಅವರೆಲ್ಲರನ್ನೂ ದೋಷಮುಕ್ತರು ಎಂದು ಪ್ರಕಟಿಸಿರುವುದು ಅಚ್ಚರಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.<br /> <br /> <strong>49 ಮಂದಿ ಮನೆಗೆ<br /> </strong>ಗೋದ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿ ಸಬರಮತಿ ಕಾರಾಗೃಹದಲ್ಲಿ ವಿಚಾರಣಾಧೀನ ಇರಿಸಲಾಗಿದ್ದ 49 ಮಂದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>