ನವದೆಹಲಿ (ಪಿಟಿಐ): ಗೋವಾದಲ್ಲಿ ನಡೆಯುತ್ತಿರುವ 90 ಗಣಿಗಳ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ. ಕಳೆದ 12 ವರ್ಷದಿಂದ ಬೊಕ್ಕಸಕ್ಕೆ ಅಂದಾಜು 35 ಸಾವಿರ ಕೋಟಿ ರೂಪಾಯಿಯ ಭಾರಿ ಹಾನಿ ಉಂಟಾಗಿದೆ ಎಂದು ನ್ಯಾಯಮೂರ್ತಿ ಎಂ.ಬಿ. ಶಾ ಆಯೋಗ ನೀಡಿದ ವರದಿಯ ಆಧಾರದ ಮೇಲೆ ಕೋರ್ಟ್ ಈ ಆದೇಶ ನೀಡಿದೆ.