<p><strong>ನವದೆಹಲಿ (ಪಿಟಿಐ):</strong> ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಗುರುವಾರ ಚೀನಾ ನೀಡಲು ಉದ್ದೇಶಿಸಿದ್ದ ಪ್ರಶಸ್ತಿ ತಿರಸ್ಕರಿಸಿದರು. ಭಾರತ-ಚೀನಾ ಸ್ನೇಹ ಅಭಿವೃದ್ಧಿ ಸಂಕೇತವಾಗಿ ಚೀನಾ ಪ್ರಧಾನಿ ವೆನ್ ಜಿಯೊಬೊ ಇಲ್ಲಿ ಈ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ ತಮ್ಮನ್ನು ಚೀನಾ ಪರ ತೋರಿಸಿಕೊಳ್ಳಲು ಬಯಸದ ಕರಣ್ ಈ ಪ್ರಶಸ್ತಿ ನಿರಾಕರಿಸಿದರು.<br /> <br /> ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ವಿಶೇಷ ವೀಸಾ ನೀಡುತ್ತಿರುವ ಚೀನಾ ಕ್ರಮಕ್ಕೆ ರಾಜ್ಯಸಭಾ ಸದಸ್ಯ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಅಧ್ಯಕ್ಷ ಹಾಗೂ ಎಐಸಿಸಿ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷರೂ ಆದ ಕರಣ್ ಅವರ ಈ ನಿರ್ಧಾರ ಒಂದು ಪ್ರತಿಭಟನೆಯಾಗಿದೆ.<br /> <br /> ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸೇರಿ ಒಂಬತ್ತು ಗಣ್ಯರಿಗೆ ಭಾರತ-ಚೀನಾ ಬಾಂಧವ್ಯ ವೃದ್ಧಿಗೆ ಶ್ರಮಿಸಿದ ಕಾರಣಕ್ಕಾಗಿ ನೀಡುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕರಣ್ ತೆರಳಲಿಲ್ಲ. ಪ್ರೊ. ತಾನ್ ಚುಂಗ್, ಜಿ. ವಿಶ್ವನಾಥನ್, ಜಿ. ಬ್ಯಾನರ್ಜಿ, ಎಂ. ಮೋಹಂತಿ, ಎಸ್. ಚಕ್ರವರ್ತಿ, ಭಾಸ್ಕರನ್, ಶೆರ್ಡಿಲ್ ಹಾಗೂ ಪಲ್ಲವಿ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದ ಇತರ ಭಾರತೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಗುರುವಾರ ಚೀನಾ ನೀಡಲು ಉದ್ದೇಶಿಸಿದ್ದ ಪ್ರಶಸ್ತಿ ತಿರಸ್ಕರಿಸಿದರು. ಭಾರತ-ಚೀನಾ ಸ್ನೇಹ ಅಭಿವೃದ್ಧಿ ಸಂಕೇತವಾಗಿ ಚೀನಾ ಪ್ರಧಾನಿ ವೆನ್ ಜಿಯೊಬೊ ಇಲ್ಲಿ ಈ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ ತಮ್ಮನ್ನು ಚೀನಾ ಪರ ತೋರಿಸಿಕೊಳ್ಳಲು ಬಯಸದ ಕರಣ್ ಈ ಪ್ರಶಸ್ತಿ ನಿರಾಕರಿಸಿದರು.<br /> <br /> ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ವಿಶೇಷ ವೀಸಾ ನೀಡುತ್ತಿರುವ ಚೀನಾ ಕ್ರಮಕ್ಕೆ ರಾಜ್ಯಸಭಾ ಸದಸ್ಯ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಅಧ್ಯಕ್ಷ ಹಾಗೂ ಎಐಸಿಸಿ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷರೂ ಆದ ಕರಣ್ ಅವರ ಈ ನಿರ್ಧಾರ ಒಂದು ಪ್ರತಿಭಟನೆಯಾಗಿದೆ.<br /> <br /> ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸೇರಿ ಒಂಬತ್ತು ಗಣ್ಯರಿಗೆ ಭಾರತ-ಚೀನಾ ಬಾಂಧವ್ಯ ವೃದ್ಧಿಗೆ ಶ್ರಮಿಸಿದ ಕಾರಣಕ್ಕಾಗಿ ನೀಡುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕರಣ್ ತೆರಳಲಿಲ್ಲ. ಪ್ರೊ. ತಾನ್ ಚುಂಗ್, ಜಿ. ವಿಶ್ವನಾಥನ್, ಜಿ. ಬ್ಯಾನರ್ಜಿ, ಎಂ. ಮೋಹಂತಿ, ಎಸ್. ಚಕ್ರವರ್ತಿ, ಭಾಸ್ಕರನ್, ಶೆರ್ಡಿಲ್ ಹಾಗೂ ಪಲ್ಲವಿ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದ ಇತರ ಭಾರತೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>