ನವದೆಹಲಿ: ಕುಲಭೂಷಣ್ ಜಾಧವ್ ಅವರ ಮರಣದಂಡನೆ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಜಾಧವ್ ಪರ ವಾದ ಮಂಡಿಸಲು ಹರೀಶ್ ಸಾಳ್ವೆ ಅವರು ಕೇವಲ ₹1 ಮಾತ್ರ ಪಡೆದಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಜಾಧವ್ ಪರ ವಾದಿಸಲು ಹರೀಶ್ ಸಾಳ್ವೆ ಅವರು ಪಡೆಯುವ ಶುಲ್ಕಕ್ಕಿಂತ ಕಡಿಮೆ ಶುಲ್ಕದಲ್ಲಿ ಉತ್ತಮ ನ್ಯಾಯವಾದಿ ಸಿಗುತ್ತಿದ್ದರು ಎಂದು ಸಂಜೀವ್ ಗೋಯಲ್ ಎಂಬವರು ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಉತ್ತರಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಈ ಪ್ರಕರಣದ ವಾದಕ್ಕಾಗಿ ಸಾಳ್ವೆ ಅವರು ಪಡೆದಿರುವ ಶುಲ್ಕ ₹1 ಮಾತ್ರ ಎಂದಿದ್ದಾರೆ.