ಯಶವಂತಪುರ– ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಎಸ್–12 ಕೋಚ್ನಲ್ಲಿ ಇಬ್ಬರು ಪ್ರಯಾಣಿಕರು ಸರಿಯಾದ ಗುರುತಿನ ದಾಖಲೆ ಹೊಂದಿರದ ಕಾರಣ ದಂಡ ಪಾವತಿಸಲು ಟಿಕೆಟ್ ಪರೀಕ್ಷಕ ಕೇಳಿದ್ದಾರೆ. ಇದರಿಂದ ಕುಪಿತಗೊಂಡು ಗುಂಪು ಟಿಕೆಟ್ ಪರೀಕ್ಷಕರನ್ನು ತಮಿಳುನಾಡಿನ ಕಟಪಾಡಿ ಜಂಕ್ಷನ್ ಬಳಿ ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದೆ. ಬೆಂಗಳೂರಿನ ಟಿಕೆಟ್ ಪರೀಕ್ಷಕ ಸಂತೋಷ್ ಕುಮಾರ್ ಗಾಯ
ಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.