ಪುಣೆ (ಪಿಟಿಐ): ಸಾಫ್ಟ್ವೇರ್ ಉದ್ಯೋಗಿ ಶೇಖ್ ಮೊಹಸಿನ್ ಸಾದಿಕ್ ಎಂಬವರ ಕೊಲೆ ಸಂಬಂಧ ಹಿಂದೂ ರಾಷ್ಟ್ರ ಸೇನಾ ಸಂಘಟನೆಯ ಇನ್ನೂ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬುಧವಾರ ತಡ ರಾತ್ರಿ ಬಂಧಿಸಿದ್ದಾರೆ.
ಶಿವಾಜಿ ಮತ್ತು ಶಿವಸೇನಾ ಮಾಜಿ ಮುಖ್ಯಸ್ಥ ಬಾಳ ಠಾಕ್ರೆ ಅವರ ಅವಹೇಳನಕಾರಿ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿರುವುದು ಕೊಲೆಗೆ ಕಾರಣವಾಗಿದ್ದು, ಈ ಸಂಬಂಧ ಈಗಾಗಲೇ 13 ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಟೆಕ್ಕಿ ಹತ್ಯೆ ಸಂಬಂಧ ಹಿಂದೂ ರಾಷ್ಟ್ರ ಸೇನಾ ಸಂಘಟನೆಯ ಮುಖ್ಯಸ್ಥ ಧನಂಜಯ್ ದೇಸಾಯಿ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಫೇಸ್ಬುಕ್ನಲ್ಲಿ ಚಿತ್ರ ಪ್ರಕಟವಾಗಿರುವುದರ ವಿರುದ್ಧ ಪ್ರಚೋದನಕಾರಿ ಸಂದೇಶ ನೀಡಿದ್ದ ಧನಂಜಯ್ ದೇಸಾಯಿ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗೊಂಡಿದ್ದರು. ಬುಧವಾರ ಮತ್ತೆ ಅವರನ್ನು ಪ್ರಚೋದನಕಾರಿ ಕರಪತ್ರ ಹಂಚಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ‘ಫೇಸ್ಬುಕ್ನಲ್ಲಿ ಪ್ರಕಟವಾಗಿರುವ ಚಿತ್ರ ಅತ್ಯಂತ ನೋವು ತಂದಿದೆ. ಹಾಗಾಗಿ ಸ್ವಲ್ಪ ಮಟ್ಟಿನ ಪರಿಣಾಮ ಸಹಜ’ ಎಂದು ಪುಣೆ ಸಂಸದ ಅನಿಲ್ ಶಿರೋಲ್ ಅವರು ಅಭಿಪ್ರಾಯಪಟ್ಟಿದ್ದಾರೆ.