ನವದೆಹಲಿ (ಪಿಟಿಐ): ರಾಷ್ಟ್ರದ ಈಶಾನ್ಯ ರಾಜ್ಯಗಳಲ್ಲಿ 58,000 ಕೋಟಿ ರೂಪಾಯಿಯ ಹಗರಣಗಳು ನಡೆದಿವೆ ಎಂದು ಟೀಕಿಸಿರುವ ಬಿಜೆಪಿ ಈ ಕುರಿತು ನಿರ್ದಿಷ್ಟ ಕಾಲಮಿತಿಯೊಳಗೆ ತನಿಖೆ ನಡೆಸಲು ಒತ್ತಾಯಿಸಿದೆ.ಭ್ರಷ್ಟಾಚಾರ ನಿಯಂತ್ರಿಸುವ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸೆ ಹುಟ್ಟಿಸುವ ಭರವಸೆಗಳನ್ನು ನೀಡಿದ್ದರು. ಆದರೆ ಅವೆಷ್ಟು ಪೊಳ್ಳು ಎಂಬುದು ಇದೀಗ ಬಯಲಾಗುತ್ತಿದೆ. ಕೇಂದ್ರ ನಾಯಕತ್ವದ ಜತೆಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೆಲ್ಲಾ ಭ್ರಷ್ಟರಾಗಿದ್ದು, ಹಣ ಮಾಡುವ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಆಪಾದಿಸಿದರು.