ರಾಮೇಶ್ವರಂ(ಪಿಟಿಐ): ಕಚ್ಛತೀವು ಪ್ರದೇಶದ ಬಳಿ ಶನಿವಾರ ಭಾರತೀಯ ಮೀನುಗಾರರಿಗೆ ಪಾನೀಯ ಮತ್ತು ಸಿಹಿ ವಿತರಿಸಿ ಅಚ್ಚರಿ ಹುಟ್ಟಿಸಿದ್ದ ಶ್ರೀಲಂಕಾ ನೌಕಾಪಡೆ, ಮಂಗಳವಾರ ಧನುಷ್ಕೋಟಿ ಸಮೀಪ ಭಾರತದ ಸಮುದ್ರ ಗಡಿಒಳಗೆ ಮೀನುಗಾರರ ಮೇಲೆ ಹಲ್ಲೆ ನಡೆಸಿದೆ.
ಈ ಘಟನೆಯಲ್ಲಿ ಎಂಟು ಮೀನುಗಾರರು ಗಾಯಗೊಂಡಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ನಾಲ್ವರು ಮೀನುಗಾರರಿಗೆ ತಲೆ, ಕೈ ಮತ್ತು ಭುಜದ ಮೇಲೆ ಪೆಟ್ಟು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗಳಾಗಿವೆ. ಉಳಿದವರಿಗೆ ಚಿಕ್ಕಪುಟ್ಟ ಗಾಯಗ ಳಾಗಿವೆ.
ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿವೆ.
ಘಟನೆ ವೇಳೆ ಮೀನುಗಾರರ ಎರಡು ದೋಣಿ ಮತ್ತು ಹತ್ತು ಬಲೆಗಳಿಗೆ ಹಾನಿಯಾಗಿದೆ. ಲಂಕಾ ನೌಕಾ ಸಿಬ್ಬಂದಿಮೀನುಗಾರರ ಮೇಲೆ ಬಾಟಲಿ, ಕಲ್ಲು ಮತ್ತು ಕಟ್ಟಿಗೆಗಳನ್ನು ಎಸೆದು ದಾಳಿ ಮಾಡಿದ್ದಾರೆ. ‘ಮಂಗಳವಾರ ನಟೆದ ಘಟನೆಯಲ್ಲಿ ಮೀನುಗಾರರ ತಪ್ಪಿಲ್ಲ. ಧನುಷ್ಕೋಟಿ ಕಡಲಲ್ಲಿ ಅವರ ಮೇಲೆ ಬಾಟಲಿ, ಕಲ್ಲು ಮತ್ತು ಕಟ್ಟಿಗೆಯಿಂದ ಥಳಿಸಲಾಗಿದೆ.