<p><strong>ಕೊಚ್ಚಿ :</strong> ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ ದಿಲೀಪ್ ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.</p>.<p>ಅವರು ಈ ಹಿಂದೆ ಸಲ್ಲಿಸಿದ್ದ ನಾಲ್ಕು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಪಾಸ್ಪೋರ್ಟ್ ವಾಪಸ್ ಮಾಡುವುದು, ಒಂದು ಲಕ್ಷ ಠೇವಣಿ ಮತ್ತು ಇದೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡುವುದು ಸೇರಿದಂತೆ ಕಠಿಣ ಷರತ್ತುಗಳನ್ನು ಮುಂದಿಟ್ಟು ನ್ಯಾಯಮೂರ್ತಿ ಸುನಿಲ್ ಥಾಮಸ್ ಜಾಮೀನು ನೀಡಿದರು.</p>.<p>ಸಾಕ್ಷ್ಯ ನಾಶ ಮಾಡಬಾರದು ಮತ್ತು ಅಗತ್ಯವಿದ್ದಾಗಲೆಲ್ಲ ತನಿಖಾಧಿಕಾರಿಗಳ ಎದುರು ಹಾಜರಾಗಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.</p>.<p>‘ದಿಲೀಪ್ ವಿರುದ್ಧದ ತನಿಖೆ ಅಂತಿಮ ಹಂತದಲ್ಲಿದೆ. ಆದ್ದರಿಂದ ಅವರನ್ನು ವಶದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು.</p>.<p>ಜುಲೈ 10ರಂದು ಬಂಧಿಸಲಾಗಿದ್ದ ದಿಲೀಪ್ ಅವರನ್ನು ಅಲುವಾ ಉಪ ಕಾರಾಗೃಹದಲ್ಲಿ 85 ದಿನಗಳಿಂದ ಇರಿಸಲಾಗಿತ್ತು.</p>.<p>’ಈ ಪ್ರಕರಣದಲ್ಲಿ ನಾನು ಸಂಪೂರ್ಣವಾಗಿ ಅಮಾಯಕ. ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ. ಚಿತ್ರರಂಗದಿಂದ ನನ್ನನ್ನು ಹೊರದೂಡಲು ಈ ಉದ್ದಿಮೆಯಲ್ಲಿರುವ ಪ್ರಬಲ ವ್ಯಕ್ತಿಗಳು ದೊಡ್ಡ ಮಟ್ಟದ ಸಂಚು ರೂಪಿಸಿದ್ದಾರೆ. ಪ್ರಮುಖ ಆರೋಪಿ ಪಲ್ಸರ್ ಸುನಿಯ ತಪ್ಪೊಪ್ಪಿಗೆಯ ಮೇರೆಗೆ ನನ್ನನ್ನು ಬಂಧಿಸಲಾಯಿತು. ಆದರೆ ಸುನಿಯನ್ನು ನಾನು ನೋಡಿಯೂ ಇಲ್ಲ, ಆತನ ಬಗ್ಗೆ ಕೇಳಿಯೂ ಇರಲಿಲ್ಲ ಮತ್ತು ಎಂದಿಗೂ ಆತನೊಂದಿಗೆ ಮಾತನ್ನೂ ಆಡಿಲ್ಲ. ಈ ತಪ್ಪೊಪ್ಪಿಗೆ ಸಹ ಉದ್ದೇಶಪೂರ್ವಕವಾದುದು’ ಎಂದು ದಿಲೀಪ್ ಜಾಮೀನು ಅರ್ಜಿಯಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ :</strong> ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ ದಿಲೀಪ್ ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.</p>.<p>ಅವರು ಈ ಹಿಂದೆ ಸಲ್ಲಿಸಿದ್ದ ನಾಲ್ಕು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಪಾಸ್ಪೋರ್ಟ್ ವಾಪಸ್ ಮಾಡುವುದು, ಒಂದು ಲಕ್ಷ ಠೇವಣಿ ಮತ್ತು ಇದೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡುವುದು ಸೇರಿದಂತೆ ಕಠಿಣ ಷರತ್ತುಗಳನ್ನು ಮುಂದಿಟ್ಟು ನ್ಯಾಯಮೂರ್ತಿ ಸುನಿಲ್ ಥಾಮಸ್ ಜಾಮೀನು ನೀಡಿದರು.</p>.<p>ಸಾಕ್ಷ್ಯ ನಾಶ ಮಾಡಬಾರದು ಮತ್ತು ಅಗತ್ಯವಿದ್ದಾಗಲೆಲ್ಲ ತನಿಖಾಧಿಕಾರಿಗಳ ಎದುರು ಹಾಜರಾಗಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.</p>.<p>‘ದಿಲೀಪ್ ವಿರುದ್ಧದ ತನಿಖೆ ಅಂತಿಮ ಹಂತದಲ್ಲಿದೆ. ಆದ್ದರಿಂದ ಅವರನ್ನು ವಶದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು.</p>.<p>ಜುಲೈ 10ರಂದು ಬಂಧಿಸಲಾಗಿದ್ದ ದಿಲೀಪ್ ಅವರನ್ನು ಅಲುವಾ ಉಪ ಕಾರಾಗೃಹದಲ್ಲಿ 85 ದಿನಗಳಿಂದ ಇರಿಸಲಾಗಿತ್ತು.</p>.<p>’ಈ ಪ್ರಕರಣದಲ್ಲಿ ನಾನು ಸಂಪೂರ್ಣವಾಗಿ ಅಮಾಯಕ. ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ. ಚಿತ್ರರಂಗದಿಂದ ನನ್ನನ್ನು ಹೊರದೂಡಲು ಈ ಉದ್ದಿಮೆಯಲ್ಲಿರುವ ಪ್ರಬಲ ವ್ಯಕ್ತಿಗಳು ದೊಡ್ಡ ಮಟ್ಟದ ಸಂಚು ರೂಪಿಸಿದ್ದಾರೆ. ಪ್ರಮುಖ ಆರೋಪಿ ಪಲ್ಸರ್ ಸುನಿಯ ತಪ್ಪೊಪ್ಪಿಗೆಯ ಮೇರೆಗೆ ನನ್ನನ್ನು ಬಂಧಿಸಲಾಯಿತು. ಆದರೆ ಸುನಿಯನ್ನು ನಾನು ನೋಡಿಯೂ ಇಲ್ಲ, ಆತನ ಬಗ್ಗೆ ಕೇಳಿಯೂ ಇರಲಿಲ್ಲ ಮತ್ತು ಎಂದಿಗೂ ಆತನೊಂದಿಗೆ ಮಾತನ್ನೂ ಆಡಿಲ್ಲ. ಈ ತಪ್ಪೊಪ್ಪಿಗೆ ಸಹ ಉದ್ದೇಶಪೂರ್ವಕವಾದುದು’ ಎಂದು ದಿಲೀಪ್ ಜಾಮೀನು ಅರ್ಜಿಯಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>