ಹೈದರಾಬಾದ್ (ಪಿಟಿಐ): ಕೆಲ ಕಂಪೆನಿಗಳಿಗೆ ಲಾಭ ಒದಗಿಸಿ ಬಳಿಕ ಅವುಗಳಿಂದ ಪ್ರತಿಫಲ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಚಂಚಲಗುಡಾ ಜೈಲಿನಲ್ಲಿರುವ ಕಡಪ ಸಂಸದ ವೈ.ಎಸ್. ಜಗನ್ಮೋಹನ್ ರೆಡ್ಡಿ ಮತ್ತು ಇತರರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 20ರ ವರೆಗೆ ಶುಕ್ರವಾರ ವಿಸ್ತರಿಸಿದೆ.