‘ಮ್ಯಾನೇಜ್ಮೆಂಟ್ ಸ್ಟಡೀಸ್’ ವಿಷಯದ ಪಠ್ಯವನ್ನು ಭಾರತೀಕರಣ ಮಾಡುವ ಹೆಸರಿನಲ್ಲಿ ಭಗವದ್ಗೀತೆಯ ಅಂಶ, ಕೌಟಿಲ್ಯ, ವಿವೇಕಾನಂದ ಮತ್ತು ಮಹಾತ್ಮಾ ಗಾಂಧಿ ಅವರ ಬಗೆಗಿನ ವಿವರಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಮಹಾಭಾರತ ಕಥೆಯಲ್ಲಿ ಬರುವ ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ಶ್ರೀಕೃಷ್ಣ ಮತ್ತು ಅರ್ಜುನನ ನಡುವೆ ನಡೆಯುವ ಸಂಭಾಷಣೆಯ ಅಂಶವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಕೆಲ ವಿದೇಶಿ ಲೇಖಕರ ಪಠ್ಯವನ್ನು ಅಳಿಸಿ ಹಾಕಿ ಇವುಗಳನ್ನು ಸೇರ್ಪಡೆಗೊಳಿಸಲಾಗಿದೆ.