ಚೆನ್ನೈ ( ಪಿಟಿಐ): ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ಅವರ ಬರ್ಬರ ಹತ್ಯೆ ಪ್ರಕರಣದ ತನಿಖೆಗೆ ಮುಖ್ಯಮಂತ್ರಿ ಜಯಲಲಿತಾ ಅವರು ಪೊಲೀಸ್ ಮಹಾನಿರ್ದೇಶಕರ ಅಧೀನದಲ್ಲಿ ವಿಶೇಷ ತನಿಖಾ ವಿಭಾಗ ರಚಿಸಿದ್ದಾರೆ.
` ಇದೊಂದು ಪೈಶಾಚಿಕ ಕೃತ್ಯ. ರಾಜಕೀಯ ಪ್ರೇರಿತವಾಗಿದ್ದರೂ ಸರಿ, ಯಾವುದೇ ರೀತಿಯ ಹಿಂಸೆ, ಅಪರಾಧಗಳಿಗೆ ನಾಗರಿಕ ಸಮಾಜದಲ್ಲಿ ಜಾಗವಿಲ್ಲ. ಸಮಾಜ ವಿರೋಧಿ ಶಕ್ತಿಗಳನ್ನು ದಮನ ಮಾಡಬೇಕು' ಎಂದು ಜಯಲಲಿತಾ ಹೇಳಿದ್ದಾರೆ.
ಆತ್ಮಾಹುತಿ ಯತ್ನ: ಸೇಲಂ ಹಾಗೂ ಧರ್ಮಪುರಿ ಜಿಲ್ಲೆಗಳ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಅವರು ವಿ.ರಮೇಶ್ ಹತ್ಯೆಗೆ ಮನನೊಂದು ಆತ್ಮಾಹುತಿಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ.
`ರಮೇಶ್ ಹತ್ಯೆ ಸುದ್ದಿ ಕೇಳಿದಾಗಿನಿಂದ ಅವರು ಉಪವಾಸ ಇದ್ದರು' ಎಂದು ಸೇಲಂ ಡಿಸಿಪಿ ಎ.ಬಾಬು ತಿಳಿಸಿದ್ದಾರೆ.