ಜೋಧಪುರ (ಪಿಟಿಐ): ಕೊಲೆಯಾದ ದಾದಿ ಭಂವರಿದೇವಿ ಪ್ರಕರಣದ ಸಂಬಂಧದಲ್ಲಿ ರಾಜಕೀಯ ವ್ಯಕ್ತಿಗಳಿಂದ ಬೆದರಿಕೆ ಬರುತ್ತಿದೆ. ಇದು ನಮ್ಮ ಪರವಾಗಿರುವ ಸಾಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸಿಬಿಐ, ರಾಜಸ್ತಾನ ಹೈಕೋರ್ಟ್ಗೆ ತಿಳಿಸಿದೆ.
ಭಂವರಿದೇವಿ ಪತಿ ಅಮರಚಂದ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಸಿಬಿಐ ವಕೀಲ ಪನ್ನೆ ಸಿಂಗ್ ಅವರು ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಈ ಪ್ರಕರಣದಲ್ಲಿ ಸಿಬಿಐ ನಿಷ್ಪಕ್ಷಪಾತ ದೃಷ್ಟಿಯಿಂದ ತನಿಖೆ ನಡೆಸಿದ್ದು, ಈ ಪ್ರಕರಣದಲ್ಲಿ ಹಲವಾರು ಪ್ರಭಾವಿ ರಾಜಕೀಯ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದರು.