<p><strong>ಮುಂಬೈ(ಪಿಟಿಐ):</strong> ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಭಾನುವಾರ ನಡೆಸಿದ ಎನ್ಕೌಂಟರ್ನಲ್ಲಿ 16 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಮೃತರಲ್ಲಿ ಜಿಲ್ಲಾ ಮಟ್ಟದ ನಕ್ಸಲ್ ಕಮಾಂಡರ್ಗಳಾದ ಸಾಯಿನಾಥ್ ಮತ್ತು ಸಿನು ಅಲಿಯಾಸ್ ಶ್ರೀಕಂಠ ಕೂಡ ಸೇರಿರುವ ಸಾಧ್ಯತೆ ಇದೆ’ ಎಂದು ಐಜಿಪಿ ಶರದ್ ಶೆಲ್ಲಾರ್ ತಿಳಿಸಿದ್ದಾರೆ.</p>.<p>‘ಗಡ್ಚಿರೋಲಿ ಪೊಲೀಸರ ಸಿ–60 ಕಮಾಂಡೊ ತಂಡ ಛತ್ತೀಸಗಡದ ಬಿಜಾಪುರ ಜಿಲ್ಲೆಯ ಗಡಿಪ್ರದೇಶದಲ್ಲಿರುವ ಕಾಸನಸುರ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯನಡೆಸುತ್ತಿದ್ದಾಗ, ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ. 12 ಮಂದಿ ನಕ್ಸಲರ ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ’ ಎಂದು ಪೊಲೀಸ್ ಮಹಾನಿರ್ದೇಶಕ ಸತೀಶ್ ಮಾಥುರ್ ಹೇಳಿದ್ದಾರೆ.</p>.<p><strong>ಎನ್ಐಎ: ನಕ್ಸಲರಿಗಾಗಿ ಪ್ರತ್ಯೇಕ ವಿಭಾಗ</strong></p>.<p><strong>ನವದೆಹಲಿ:</strong> ಉಗ್ರರು ಮತ್ತು ನಕ್ಸಲರಿಗೆ ಹಣಕಾಸು ಪೂರೈಕೆ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣಗಳ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ತನಿಖಾ ದಳದಲ್ಲಿ (ಎನ್ಐಎ) ಪ್ರತ್ಯೇಕ ವಿಭಾಗವೊಂದು ಆರಂಭವಾಗಲಿದೆ. ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಇದಕ್ಕೆ ಒಪ್ಪಿಗೆ ನೀಡಿದೆ.</p>.<p>ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿರುವ ನಕ್ಸಲ್ ನಾಯಕರು ಹಾಗೂ ಅವರ ಬಗ್ಗೆ ಸಹಾನುಭೂತಿ ಹೊಂದಿದವರ ಮೇಲೆ ಈ ತಂಡವು ನಿಗಾ ಇಡಲಿದೆ. ನಕ್ಸಲ್ ಮುಖಂಡರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹಣ ವ್ಯಯಿಸುತ್ತಿದ್ದಾರೆ ಎಂಬ ಆರೋಪವಿದೆ.</p>.<p>ಇದೇ ಫೆಬ್ರುವರಿಯಲ್ಲಿ ಜಾರ್ಖಂಡ್ನ ಮಾವೊವಾದಿ ನಾಯಕ ಸಂದೀಪ್ ಯಾದವ್ಗೆ ಸೇರಿದ ₹86 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿತ್ತು. ಜೊತೆಗೆ ಬಿಹಾರದ ನಕ್ಸಲ್ ಮುಖಂಡರಾದ ಪ್ರದುಮನ್ ಶರ್ಮಾ ಹಾಗೂ ಪ್ರಮೋದ್ ಶರ್ಮಾ ಅವರಿಗೆ ಸೇರಿದ ₹68 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.</p>.<p>ಉಗ್ರರಿಗೆ ಹಣ ಸರಬರಾಜು ಆರೋಪದ ಮೇಲೆ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಎನ್ಐಎ ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿ, ಹಲವರನ್ನು ಬಂಧಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ(ಪಿಟಿಐ):</strong> ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಭಾನುವಾರ ನಡೆಸಿದ ಎನ್ಕೌಂಟರ್ನಲ್ಲಿ 16 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಮೃತರಲ್ಲಿ ಜಿಲ್ಲಾ ಮಟ್ಟದ ನಕ್ಸಲ್ ಕಮಾಂಡರ್ಗಳಾದ ಸಾಯಿನಾಥ್ ಮತ್ತು ಸಿನು ಅಲಿಯಾಸ್ ಶ್ರೀಕಂಠ ಕೂಡ ಸೇರಿರುವ ಸಾಧ್ಯತೆ ಇದೆ’ ಎಂದು ಐಜಿಪಿ ಶರದ್ ಶೆಲ್ಲಾರ್ ತಿಳಿಸಿದ್ದಾರೆ.</p>.<p>‘ಗಡ್ಚಿರೋಲಿ ಪೊಲೀಸರ ಸಿ–60 ಕಮಾಂಡೊ ತಂಡ ಛತ್ತೀಸಗಡದ ಬಿಜಾಪುರ ಜಿಲ್ಲೆಯ ಗಡಿಪ್ರದೇಶದಲ್ಲಿರುವ ಕಾಸನಸುರ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯನಡೆಸುತ್ತಿದ್ದಾಗ, ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ. 12 ಮಂದಿ ನಕ್ಸಲರ ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ’ ಎಂದು ಪೊಲೀಸ್ ಮಹಾನಿರ್ದೇಶಕ ಸತೀಶ್ ಮಾಥುರ್ ಹೇಳಿದ್ದಾರೆ.</p>.<p><strong>ಎನ್ಐಎ: ನಕ್ಸಲರಿಗಾಗಿ ಪ್ರತ್ಯೇಕ ವಿಭಾಗ</strong></p>.<p><strong>ನವದೆಹಲಿ:</strong> ಉಗ್ರರು ಮತ್ತು ನಕ್ಸಲರಿಗೆ ಹಣಕಾಸು ಪೂರೈಕೆ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣಗಳ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ತನಿಖಾ ದಳದಲ್ಲಿ (ಎನ್ಐಎ) ಪ್ರತ್ಯೇಕ ವಿಭಾಗವೊಂದು ಆರಂಭವಾಗಲಿದೆ. ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಇದಕ್ಕೆ ಒಪ್ಪಿಗೆ ನೀಡಿದೆ.</p>.<p>ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿರುವ ನಕ್ಸಲ್ ನಾಯಕರು ಹಾಗೂ ಅವರ ಬಗ್ಗೆ ಸಹಾನುಭೂತಿ ಹೊಂದಿದವರ ಮೇಲೆ ಈ ತಂಡವು ನಿಗಾ ಇಡಲಿದೆ. ನಕ್ಸಲ್ ಮುಖಂಡರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹಣ ವ್ಯಯಿಸುತ್ತಿದ್ದಾರೆ ಎಂಬ ಆರೋಪವಿದೆ.</p>.<p>ಇದೇ ಫೆಬ್ರುವರಿಯಲ್ಲಿ ಜಾರ್ಖಂಡ್ನ ಮಾವೊವಾದಿ ನಾಯಕ ಸಂದೀಪ್ ಯಾದವ್ಗೆ ಸೇರಿದ ₹86 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿತ್ತು. ಜೊತೆಗೆ ಬಿಹಾರದ ನಕ್ಸಲ್ ಮುಖಂಡರಾದ ಪ್ರದುಮನ್ ಶರ್ಮಾ ಹಾಗೂ ಪ್ರಮೋದ್ ಶರ್ಮಾ ಅವರಿಗೆ ಸೇರಿದ ₹68 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.</p>.<p>ಉಗ್ರರಿಗೆ ಹಣ ಸರಬರಾಜು ಆರೋಪದ ಮೇಲೆ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಎನ್ಐಎ ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿ, ಹಲವರನ್ನು ಬಂಧಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>