ಈ ಸಂಬಂಧ ಸೃಷ್ಟಿಯಾಗಿರುವ ವಿವಾದ ಕುರಿತು ಮಾತನಾಡಿರುವ ಉತ್ತರಪ್ರದೇಶ ಸಂಸದೆ, 'ಜಿನ್ನಾ ಮಹಾಪುರುಷ. ಅವರು ದೇಶಕ್ಕಾಗಿ ಹೋರಾಡಿದ್ದಾರೆ. ಸಂಸತ್ತಿನ ಗೋಡೆಯ ಮೇಲೆ ಅವರ ಭಾವಚಿತ್ರವಿದೆ. ಅವರನ್ನು ಗೌರವದಿಂದ ನೆನಪಿನಲ್ಲಿಟ್ಟುಕೊಳ್ಳಬೇಕು. ಅಗತ್ಯವಿರುವಲ್ಲಿ ಅವರ ಭಾವಚಿತ್ರಗಳನ್ನು ಇರಿಸಬೇಕು. ದಲಿತರ ಸಮಸ್ಯೆಗಳ ಕುರಿತ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ನಾನು ಒಪ್ಪುವುದಿಲ್ಲ’ ಪ್ರತಿಕ್ರಿಯಿಸಿದ್ದಾರೆ.