ಅಹಮದ್ನಗರ, ಮಹಾರಾಷ್ಟ್ರ (ಪಿಟಿಐ): ಮೇಲ್ವರ್ಗದ ಬಾಲಕಿಯನ್ನು ಪ್ರೀತಿಸಿದ ದಲಿತ ಯುವಕನನ್ನು ಕೊಂದು ಮರವೊಂದಕ್ಕೆ ನೇಣು ಹಾಕಿದ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತ 17 ವರ್ಷದ ಯುವಕನ ತಂದೆ ರಾಜು ನಾಮದೇವ್ ಏಜ್ ಅವರು ನೀಡಿದ ದೂರಿನನ್ವಯ ಶಂಕಿತರಾದ ಸಚಿನ್ ಹಾಸ್ರಾವ್ ಗೊಲೇಕರ್ (21) ಮತ್ತು ಶೇಶರಾವ್ ಯೆವಾಲೆ (42) ಎಂಬುವವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.