ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ‘ಎ’, ‘ಬಿ’ ಮತ್ತು ‘ಸಿ’ ಕೆಟಗೆರಿ ಗಣಿಗಳಲ್ಲಿ, ಈಗ ನಿಗದಿಗೊಳಿಸಿರುವ ವಾರ್ಷಿಕ 30 ದಶಲಕ್ಷ ಮೆಟ್ರಿಕ್ ಟನ್ ಅದಿರು ಉತ್ಪಾದನೆಯ ಮಿತಿಯನ್ನು 40 ದಶಲಕ್ಷ ಟನ್ಗೆ ಹೆಚ್ಚಿಸುವಂತೆ ಉಕ್ಕು ಉತ್ಪಾದನಾ ಘಟಕಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠವು, ಸರ್ಕಾರಿ ಒಡೆತನದ ಗಣಿಗಳಲ್ಲಿ ಅದಿರು ಉತ್ಪಾದನೆ ಹೆಚ್ಚಿಸುವುದಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನಿರಾಕರಿಸಿತು.