ಮೋದಿ ಪ್ರಧಾನಿಯಾಗಿ 5 ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ದೇಶದಲ್ಲಿ ಕೆಲ ಮಟ್ಟಿಗೆ ಸಕರಾತ್ಮಕ ಭಾವನೆ ಬಿತ್ತಿದ್ದಾರೆ. ಆದರೆ ಜನರ ಆಶೋತ್ತರಗಳು ಈಡೇರಿವೆಯೇ ಎನ್ನು-ವುದನ್ನು ಕಾಲವೇ ಹೇಳಲಿದೆ ಎಂದು ತಿಳಿಸಿದ್ದಾರೆ.
ಬದಲಾವಣೆಗಾಗಿ ದೇಶದ ಜನರು ಕಾತರರಾಗಿದ್ದಾರೆ. ಅವರ ಭರ-ವಸೆಗಳು ಕಮರಿಹೋಗಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಎನ್ಡಿಎ ಭರವಸೆಗಳನ್ನು ನೀಡಿದೆ. ಆದರೆ, ಅವುಗಳನ್ನು ಜಾರಿಗೊಳಿಸುವಲ್ಲಿ ಇಲ್ಲಿಯವರೆಗೆ ನಿಧಾನಗತಿ ಅನುಸರಿಸುತ್ತಿದೆ. ಇಲ್ಲಿಯವರೆಗೆ ಏನೂ ಬದಲಾವಣೆಗಳಾಗಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಹಿಂದಿನ ಸರ್ಕಾರ (ಯುಪಿಎ) ಏನೂ ಮಾಡಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಬೆಲೆ ಏರಿಕೆ ನಿಯಂತ್ರಣ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ’ ಎಂದಿದ್ದಾರೆ.