ಲಖನೌ (ಪಿಟಿಐ): ಪಕ್ಷವನ್ನು ಇತ್ತೀಚೆಗೆ ತ್ಯಜಿಸಿರುವ ರಾಜ್ಯಸಭಾ ಸದಸ್ಯ ಅಖಿಲೇಶ್ ದಾಸ್ ಅವರು ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಿ ಮರು ನಾಮಕರಣಗೊಳ್ಳಲು ತಮಗೆ ₨100 ಕೋಟಿ ಆಮಿಷ ಒಡ್ಡಿದ್ದರು ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಆಪಾದಿಸಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ್ದ ದಾಸ್, ತಮಗೆ ನೂರು ಕೋಟಿ ಕೊಡಲು ಮುಂದಾಗಿದ್ದರು ಎಂದು ಮಾಯಾವತಿ ತಿಳಿಸಿದ್ದಾರೆ.