‘ರಾಮಮಂದಿರ ವಿಷಯ ಎರಡು ಸಮುದಾಯಗಳು ಸೌಹಾರ್ದಯುತವಾಗಿ ಬೆರೆಯಲು ಅವಕಾಶ ಒದಗಿಸಲಿದೆ. ಅಲ್ಲದೆ, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ದೊಡ್ಡತನ ತೋರಲು ದಾರಿ ಮಾಡಿಕೊಡಲಿದೆ ಎಂದು ರವಿಶಂಕರ್ ಭಾವಿಸಿದ್ದಾರೆ. ಎರಡೂ ಸಮುದಾಯಗಳ ಧಾರ್ಮಿಕ ನಾಯಕರ ಒಪ್ಪಿಗೆ ಮತ್ತು ಸಕಾರಾತ್ಮಕ ಚಿಂತನೆಯಿಂದ ಪರಿಹಾರ ಕಂಡುಕೊಳ್ಳುವುದು ಅವರ ಉದ್ದೇಶವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.