<p><strong>ತೇಜ್ಪಾಲ್ ಪ್ರಕರಣ: ಸಾಕ್ಷಿಗಳ ಹೇಳಿಕೆ ದಾಖಲು<br /> ಪಣಜಿ (ಪಿಟಿಐ): </strong>ತೆಹೆಲ್ಕಾ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಪತ್ರಕರ್ತೆಯ ಮೂವರು ಸಹೋದ್ಯೋಗಿಗಳು ಶುಕ್ರವಾರ ಇಲ್ಲಿನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿದರು. ಈ ಸಾಕ್ಷಿಗಳು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ ಪ್ರತ್ಯೇಕವಾಗಿ ಮ್ಯಾಜಿಸ್ಟ್ರೇಟ್ರವರ ಮುಂದೆ ಸಾಕ್ಷ್ಯ ನುಡಿದರು. ಇಡೀ ದಿನ ಮೂವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.<br /> <br /> <strong>ನಿರೀಕ್ಷಣಾ ಜಾಮೀನು ಇಲ್ಲ: ಸುಪ್ರೀಂ<br /> ನವದೆಹಲಿ (ಪಿಟಿಐ):</strong> ತಲೆಮರೆಸಿಕೊಂಡ ಅಥವಾ ತನಿಖೆಗೆ ಸಹಕರಿಸದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ವ್ಯಕ್ತಿಯೊಬ್ಬನ್ನನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎನ್ನುವುದು ಖಚಿತಗೊಂಡ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನೊಳಗೊಂಡ ಪೀಠ ಹೇಳಿದೆ.<br /> <br /> <strong>ಮೂವರು ಕಾರ್ಮಿಕರ ಸಾವು<br /> ಮುಂಬೈ:</strong> ಇಲ್ಲಿಗೆ ಸಮೀಪದ ಡೊಂಬಿವಿಲಿಯಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಮೃತಪಟ್ಟು ಕನಿಷ್ಠ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ. ಸಲಕರಣೆಗಳ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.<br /> <br /> <strong>ಸಂಜಯ್ ದತ್ಗೆ ಒಂದು ತಿಂಗಳು ಪೆರೋಲ್ <br /> ಮುಂಬೈ:</strong> 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಪುಣೆಯ ಯೆರವಡಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಪೆರೋಲ್ ಮೇಲೆ ತೆರಳಲು ಅನುಮತಿ ನೀಡಲಾಗಿದೆ. ಪತ್ನಿ ಮಾನ್ಯತಾ ದತ್ ಅನಾರೋಗ್ಯದ ಕಾರಣ ಪೆರೋಲ್ ಮೇಲೆ ತೆರಳಲು ಅನುಮತಿ ನೀಡುವಂತೆ ಕೋರಿ ದತ್ ಅರ್ಜಿ ಸಲ್ಲಿಸಿದ್ದರು.<br /> <br /> <strong>ಬಾಬರಿ ಮಸೀದಿ: ವಿಳಂಬವಾದ ತೀರ್ಪು<br /> ಲಖನೌ:</strong> ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸವಾಗಿ ಎರಡು ದಶಕಗಳು ಕಳೆದರೂ, ಪ್ರಕರಣದ ತೀರ್ಪಿಗೆ ಇನ್ನೂ ಕಾಯಬೇಕಾಗಿದೆ. ರಾಮ ಜನ್ಮಭೂಮಿ – ಬಾಬರಿ ಮಸೀದಿ ನಿವೇಶನದ ಹಕ್ಕು ಕೋರಿ ದಾವೆ ಹೂಡಿರುವ ಪ್ರಮುಖ ಧಾರ್ಮಿಕ ನಾಯಕರಾದ ನಿರ್ಮೋಹಿ ಅಖಾರದ ಸಂತ ಮಹಾಂತ ಭಾಸ್ಕರ್ ದಾಸ್ ಮತ್ತು ಮುಸಲ್ಮಾನ ಪ್ರತಿನಿಧಿ ಮೊಹಮ್ಮದ್ ಹಶೀಂ ಅನ್ಸಾರಿ ಅವರ ನೋವು ಮತ್ತು ದುಗುಡಕ್ಕೂ ಇದು ಕಾರಣವಾಗಿದೆ.<br /> <br /> ‘ಸದ್ಯಕ್ಕೆ ತೀರ್ಪು ಹೊರಬೀಳುವ ನಿರೀಕ್ಷೆ ಇಲ್ಲ’ ಎಂದು ದಾಸ್ ನುಡಿದರೆ, ‘ರಾಜಕಾರಣಿಗಳಿಗೆ ನಿರ್ಣಯ ಬೇಕಿಲ್ಲ’ ಎಂದು ಅನ್ಸಾರಿ ಹೇಳಿದ್ದಾರೆ. ಇಬ್ಬರೂ ತೀರ್ಪು ವಿಳಂಬಕ್ಕೆ ಅತೃಪ್ತಿ ವ್ಯಕ್ತಪಡಿಸಿದರೂ, ಕೊನೆಯವರೆಗೂ ತಮ್ಮ ಹೋರಾಟಮುಂದುವರಿಸುವುದಾಗಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇಜ್ಪಾಲ್ ಪ್ರಕರಣ: ಸಾಕ್ಷಿಗಳ ಹೇಳಿಕೆ ದಾಖಲು<br /> ಪಣಜಿ (ಪಿಟಿಐ): </strong>ತೆಹೆಲ್ಕಾ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಪತ್ರಕರ್ತೆಯ ಮೂವರು ಸಹೋದ್ಯೋಗಿಗಳು ಶುಕ್ರವಾರ ಇಲ್ಲಿನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿದರು. ಈ ಸಾಕ್ಷಿಗಳು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ ಪ್ರತ್ಯೇಕವಾಗಿ ಮ್ಯಾಜಿಸ್ಟ್ರೇಟ್ರವರ ಮುಂದೆ ಸಾಕ್ಷ್ಯ ನುಡಿದರು. ಇಡೀ ದಿನ ಮೂವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.<br /> <br /> <strong>ನಿರೀಕ್ಷಣಾ ಜಾಮೀನು ಇಲ್ಲ: ಸುಪ್ರೀಂ<br /> ನವದೆಹಲಿ (ಪಿಟಿಐ):</strong> ತಲೆಮರೆಸಿಕೊಂಡ ಅಥವಾ ತನಿಖೆಗೆ ಸಹಕರಿಸದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ವ್ಯಕ್ತಿಯೊಬ್ಬನ್ನನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎನ್ನುವುದು ಖಚಿತಗೊಂಡ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನೊಳಗೊಂಡ ಪೀಠ ಹೇಳಿದೆ.<br /> <br /> <strong>ಮೂವರು ಕಾರ್ಮಿಕರ ಸಾವು<br /> ಮುಂಬೈ:</strong> ಇಲ್ಲಿಗೆ ಸಮೀಪದ ಡೊಂಬಿವಿಲಿಯಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಮೃತಪಟ್ಟು ಕನಿಷ್ಠ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ. ಸಲಕರಣೆಗಳ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.<br /> <br /> <strong>ಸಂಜಯ್ ದತ್ಗೆ ಒಂದು ತಿಂಗಳು ಪೆರೋಲ್ <br /> ಮುಂಬೈ:</strong> 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಪುಣೆಯ ಯೆರವಡಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಪೆರೋಲ್ ಮೇಲೆ ತೆರಳಲು ಅನುಮತಿ ನೀಡಲಾಗಿದೆ. ಪತ್ನಿ ಮಾನ್ಯತಾ ದತ್ ಅನಾರೋಗ್ಯದ ಕಾರಣ ಪೆರೋಲ್ ಮೇಲೆ ತೆರಳಲು ಅನುಮತಿ ನೀಡುವಂತೆ ಕೋರಿ ದತ್ ಅರ್ಜಿ ಸಲ್ಲಿಸಿದ್ದರು.<br /> <br /> <strong>ಬಾಬರಿ ಮಸೀದಿ: ವಿಳಂಬವಾದ ತೀರ್ಪು<br /> ಲಖನೌ:</strong> ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸವಾಗಿ ಎರಡು ದಶಕಗಳು ಕಳೆದರೂ, ಪ್ರಕರಣದ ತೀರ್ಪಿಗೆ ಇನ್ನೂ ಕಾಯಬೇಕಾಗಿದೆ. ರಾಮ ಜನ್ಮಭೂಮಿ – ಬಾಬರಿ ಮಸೀದಿ ನಿವೇಶನದ ಹಕ್ಕು ಕೋರಿ ದಾವೆ ಹೂಡಿರುವ ಪ್ರಮುಖ ಧಾರ್ಮಿಕ ನಾಯಕರಾದ ನಿರ್ಮೋಹಿ ಅಖಾರದ ಸಂತ ಮಹಾಂತ ಭಾಸ್ಕರ್ ದಾಸ್ ಮತ್ತು ಮುಸಲ್ಮಾನ ಪ್ರತಿನಿಧಿ ಮೊಹಮ್ಮದ್ ಹಶೀಂ ಅನ್ಸಾರಿ ಅವರ ನೋವು ಮತ್ತು ದುಗುಡಕ್ಕೂ ಇದು ಕಾರಣವಾಗಿದೆ.<br /> <br /> ‘ಸದ್ಯಕ್ಕೆ ತೀರ್ಪು ಹೊರಬೀಳುವ ನಿರೀಕ್ಷೆ ಇಲ್ಲ’ ಎಂದು ದಾಸ್ ನುಡಿದರೆ, ‘ರಾಜಕಾರಣಿಗಳಿಗೆ ನಿರ್ಣಯ ಬೇಕಿಲ್ಲ’ ಎಂದು ಅನ್ಸಾರಿ ಹೇಳಿದ್ದಾರೆ. ಇಬ್ಬರೂ ತೀರ್ಪು ವಿಳಂಬಕ್ಕೆ ಅತೃಪ್ತಿ ವ್ಯಕ್ತಪಡಿಸಿದರೂ, ಕೊನೆಯವರೆಗೂ ತಮ್ಮ ಹೋರಾಟಮುಂದುವರಿಸುವುದಾಗಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>