ವಾಯುಸೇನಾ ದಿನಾಚರಣೆ ಕುರಿತು ಇಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದ್ದಾರೆ. ‘ಸರ್ತಾಜ್ ಕುಟುಂಬಕ್ಕೆ ಅಗತ್ಯವಿರುವ ರಕ್ಷಣೆ ಮತ್ತು ಬೆಂಬಲವನ್ನು ನಾವು ನೀಡುತ್ತೇವೆ. ಸರ್ತಾಜ್ ಅವರು ಸದ್ಯ ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಕುಟುಂಬವನ್ನು ಚೆನ್ನೈಗೆ ಸ್ಥಳಾಂತರಿಸುವುದು ಅಥವಾ ಕುಟುಂಬ ಎಲ್ಲಿ ಇರಲು ಬಯಸುತ್ತದೋ ಅಲ್ಲಿಗೆ ಸರ್ತಾಜ್ ವರ್ಗಾವಣೆ ಮಾಡುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದಿದ್ದಾರೆ.
ಕೇಂದ್ರದ ಪ್ರಾಯೋಜಕತ್ವ: (ಪಿಟಿಐ): ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ತೀವ್ರಗಾಮಿಗಳ ಗುಂಪು ಬೆಳೆಯುತ್ತಿರುವುದರ ಫಲವೇ ಇಕ್ಲಾಖ್ ಹತ್ಯೆ. ಈ ಗುಂಪುಗಳು, ಗೋಹತ್ಯೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿವೆ. ಈ ಮೂಲಕ ಸಾಮಾಜಿಕ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿವೆ ಎಂದು ಸಿಪಿಐನ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.
***
ಇಕ್ಲಾಖ್ ಹತ್ಯೆಗೆ ಸಂಬಂಧ ರಾಜ್ಯದ ಜನತೆ ಶಾಂತಿ ಕಾಪಾಡಬೇಕು. ತನಿಖೆ ನಡೆಸಲು ರಾಜ್ಯ ಸರ್ಕಾರದೊಂದಿಗೆ ಸಹಕರಿಸಬೇಕು
-ರಾಮ್ ನಾಯಕ್, ಉತ್ತರ ಪ್ರದೇಶ ರಾಜ್ಯಪಾಲ