ಸಿಬಿಐ ಕಚೇರಿಯೊಳಗೆ ಹೋಗುವ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ಅರುಣ್ ಶೌರಿ, ಮೊದಲು ಬಂದವರಿಗೆ ಆದ್ಯತೆ ಸೇರಿದಂತೆ ದೂರಸಂಪರ್ಕ ಇಲಾಖೆಯ ನೀತಿನಿಯಮಾವಳಿ ಪಾಲನೆಯಲ್ಲಿ ತಪ್ಪೇನು ನಡೆದಿಲ್ಲ. ಸರ್ಕಾರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇಲ್ಲಿ ಮೊದಲು ಬಂದವರಿಗೆ ಆದ್ಯತೆ ಮುಖ್ಯವಲ್ಲ, ಹಣ ಮಾಡುವುದೇ ಇಲ್ಲಿನ ಪ್ರಮುಖ ಅಂಶ" ಎಂದು ದೂರಿದರು.