<p><strong>ನವದೆಹಲಿ (ಪಿಟಿಐ): </strong>`ಸಿಯಾಚಿನ್ ಕುರಿತಂತೆ ಹಠಾತ್ ನಿರ್ಧಾರ ಇಲ್ಲವೆ ಏಕಾಏಕಿ ನಾಟಕೀಯ ಘೋಷಣೆಗಳು~ ಹೊರಬೀಳುತ್ತವೆ ಎಂಬ ನಿರೀಕ್ಷೆ ಬೇಡ~ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.<br /> <br /> ಸೇನೆಯ ಮೂರು ವಿಭಾಗಗಳ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಭಾರತ- ಪಾಕ್ ರಕ್ಷಣಾ ಇಲಾಖೆ ಕಾರ್ಯದರ್ಶಿಗಳ ಮಟ್ಟದ ಸಭೆಯು ಇದೇ 11- 12ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.<br /> <br /> `ಸಿಯಾಚಿನ್ ವಿಚಾರದಲ್ಲಿ ನಾವು ನಮ್ಮ ನಿಲುವಿಗೆ ಬದ್ಧರಾಗಿಯೇ ಇರುತ್ತವೆ. ಸಿಯಾಚಿನ್ ಅತ್ಯಂತ ಸೂಕ್ಷ್ಮ ಪ್ರದೇಶ, ದೇಶದ ಭದ್ರತೆಯ ದೃಷ್ಟಿಯಿಂದಲೂ ಅದು ಮಹತ್ವ ಪೂರ್ಣವಾದುದು. ಹಾಗಾಗಿ ನಾಟಕೀಯವಾದ ನಿರ್ಧಾರಗಳು ಹೊರಬೀಳುತ್ತವೆ ಎಂಬ ನಿರೀಕ್ಷೆ ಬೇಡ ~ ಎಂದು ತಿಳಿಸಿದ್ದಾರೆ.<br /> <br /> `ಸಿಯಾಚಿನ್ ಪ್ರದೇಶದಲ್ಲಿ ಸೇನಾ ತುಕಡಿಗಳ ನಿಯೋಜನೆಯ ಸದ್ಯದ ಸ್ಥಿತಿಗತಿ ಬಗ್ಗೆ ಉಭಯ ದೇಶಗಳೂ ಖಚಿತವಾದ ದೃಢೀಕರಣ ನೀಡುವುದು ಅವಶ್ಯಕ~ ಎಂದೂ ನುಡಿದಿದ್ದಾರೆ.ಸಿಯಾಚಿನ್ ವಿಚಾರವನ್ನು ನಿರ್ವಹಿಸುತ್ತಿರುವ ಬಗ್ಗೆ ಸಂಪುಟದ ಭದ್ರತಾ ಉಪಸಮಿತಿ ಗುರುವಾರ ಸಭೆ ನಡೆಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>`ಸಿಯಾಚಿನ್ ಕುರಿತಂತೆ ಹಠಾತ್ ನಿರ್ಧಾರ ಇಲ್ಲವೆ ಏಕಾಏಕಿ ನಾಟಕೀಯ ಘೋಷಣೆಗಳು~ ಹೊರಬೀಳುತ್ತವೆ ಎಂಬ ನಿರೀಕ್ಷೆ ಬೇಡ~ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.<br /> <br /> ಸೇನೆಯ ಮೂರು ವಿಭಾಗಗಳ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಭಾರತ- ಪಾಕ್ ರಕ್ಷಣಾ ಇಲಾಖೆ ಕಾರ್ಯದರ್ಶಿಗಳ ಮಟ್ಟದ ಸಭೆಯು ಇದೇ 11- 12ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.<br /> <br /> `ಸಿಯಾಚಿನ್ ವಿಚಾರದಲ್ಲಿ ನಾವು ನಮ್ಮ ನಿಲುವಿಗೆ ಬದ್ಧರಾಗಿಯೇ ಇರುತ್ತವೆ. ಸಿಯಾಚಿನ್ ಅತ್ಯಂತ ಸೂಕ್ಷ್ಮ ಪ್ರದೇಶ, ದೇಶದ ಭದ್ರತೆಯ ದೃಷ್ಟಿಯಿಂದಲೂ ಅದು ಮಹತ್ವ ಪೂರ್ಣವಾದುದು. ಹಾಗಾಗಿ ನಾಟಕೀಯವಾದ ನಿರ್ಧಾರಗಳು ಹೊರಬೀಳುತ್ತವೆ ಎಂಬ ನಿರೀಕ್ಷೆ ಬೇಡ ~ ಎಂದು ತಿಳಿಸಿದ್ದಾರೆ.<br /> <br /> `ಸಿಯಾಚಿನ್ ಪ್ರದೇಶದಲ್ಲಿ ಸೇನಾ ತುಕಡಿಗಳ ನಿಯೋಜನೆಯ ಸದ್ಯದ ಸ್ಥಿತಿಗತಿ ಬಗ್ಗೆ ಉಭಯ ದೇಶಗಳೂ ಖಚಿತವಾದ ದೃಢೀಕರಣ ನೀಡುವುದು ಅವಶ್ಯಕ~ ಎಂದೂ ನುಡಿದಿದ್ದಾರೆ.ಸಿಯಾಚಿನ್ ವಿಚಾರವನ್ನು ನಿರ್ವಹಿಸುತ್ತಿರುವ ಬಗ್ಗೆ ಸಂಪುಟದ ಭದ್ರತಾ ಉಪಸಮಿತಿ ಗುರುವಾರ ಸಭೆ ನಡೆಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>