ಬೆಂಗಳೂರು: ಕೋವಿಡ್ 19 ಹೋರಾಟದಲ್ಲಿ ಹಗಲಿರುಳು ದುಡಿಯುತ್ತಿರುವ ಹೋರಾಟಗಾರರು ಕೋವಿಡ್ ಸೋಂಕಿನಿಂದಮರಣ ಹೊಂದಿದರೆ ₹30 ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ.
ಕೋವಿಡ್ - 19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತರು ,ಅಂಗನವಾಡಿ ಸಹಾಯಕರು,ಪೌರ ಕಾರ್ಮಿಕರು ಹಾಗೂಪೋಲೀಸ್ ಸಿಬ್ಬಂದಿಗೆ ಸೋಂಕು ತಗುಲಿ ಮೃತಪಟ್ಟರೆ ಈ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.