ಶಂಕರ ಭಾರತಿ ಸ್ವಾಮೀಜಿ, ‘ಶಂಕರಾಚಾರ್ಯರ ಸ್ತೋತ್ರಗಳಲ್ಲಿ ಮಾನಸಿಕ ನೆಮ್ಮದಿ, ಭಾವೈಕ್ಯ ಅಡಗಿದೆ. ಸೌಂದರ್ಯಲಹರಿಯಲ್ಲಿ 100 ಶ್ಲೋಕಗಳು ಹಾಗೂ ದಕ್ಷಿಣಾಮೂರ್ತಿ ಅಷ್ಟಕದಲ್ಲಿ 10 ಶ್ಲೋಕಗಳಿವೆ. ವಿದ್ಯಾರ್ಥಿಗಳ ಕಲಿಕೆ ದೃಷ್ಟಿಯಿಂದ ಸೌಂದರ್ಯಲಹರಿಯಲ್ಲಿ 11 ಶ್ಲೋಕಗಳು ಹಾಗೂ ದಕ್ಷಿಣಾಮೂರ್ತಿ ಅಷ್ಟಕದಲ್ಲಿ 10 ಶ್ಲೋಕಗಳನ್ನು ಹೇಳಿಕೊಡಲಾಗಿದೆ. ಸುಮಾರು 50 ಸಾವಿರ ವಿದ್ಯಾರ್ಥಿಗಳು ಪಾರಾಯಣ ಮಾಡಲಿದ್ದಾರೆ’ ಎಂದರು.