ತಿಕೋಟಾ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಹಣ್ಣಾಗಿ ಕಟಾವಿಗೆ ಬಂದ ದ್ರಾಕ್ಷಿ ಪಡ ಶನಿವಾರ ಸುರಿದ ಭಾರಿ ಗಾಳಿ–ಮಳೆಗೆ ನೆಲಕ್ಕುರುಳಿದ್ದು, 30 ಟನ್ಗಳಷ್ಟು ಹಣ್ಣಾದ ದ್ರಾಕ್ಷಿ ಮಣ್ಣುಪಾಲಾಗಿವೆ.
ಅನೀಲ ಶಂಕರ ದೇವಕಾತೆ ಎಂಬ ರೈತರ ಈ ದ್ರಾಕ್ಷಿ ಪಡ ಹಾಳಾಗಿದೆ. ‘ಈ ವರ್ಷ ಉತ್ತಮ ಆದಾಯದ ನಿರೀಕ್ಷೆ ಇತ್ತು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.
ಸ್ಥಳಕ್ಕಾಗಮಿಸಿದ ತಾಲ್ಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹಾನಿ ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡುವ ಭರವಸೆ ನೀಡಿದರು.