ಇಲ್ಲಿನ ರಂಗಾಯಣದ ಸಮುಚ್ಚಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಾಹಿತ್ಯ ಸಂಕ್ರಾಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜಕಾರಣದ ಕುರಿತು ಕವಿಗಳು ಹಾಗೂ ಸಾಹಿತಿಗಳು ಮಾತನಾಡಬಾರದು ಎಂದು ಹೇಳುವ ಹಲವರನ್ನು ನಾವಿಂದು ಕಾಣಬಹುದು. ಸಮಾಜದ ಕುರಿತಾಗಿ ಯಾರೊಬ್ಬರೂ ಚಿಂತನೆ ಮಾಡಬಾರದು ಎಂಬ ಸ್ಥಿತಿಯಲ್ಲಿದ್ದೇವೆ. ಹಾಗೆ ಯೋಚಿಸಿ, ‘ಉಪದ್ರವಿ’ ಎನಿಸುವ ಲೇಖಕ ಸಮಾಜದಲ್ಲಿ ಹುಚ್ಚನಾಗುತ್ತಾನೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ’ ಎಂದು ಆತಂಕ ವ್ಯಕ್ತಪಡಿಸಿದರು.