ಬೆಂಗಳೂರು: ‘ಅಭಿವೃದ್ಧಿ ನಿಟ್ಟಿನಲ್ಲಿನ ಜಮೀನು ಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸದೇ ಇರುವುದು; ಪ್ರಾಥಮಿಕ ಅಧಿಸೂಚನೆಯಲ್ಲಿ ಗುರುತಿಸಲಾದ ಜಮೀನಿನ ಮಾಲೀಕರಿಗೆ ಸಾಕಷ್ಟು ಅನಾನುಕೂಲತೆ ಉಂಟು ಮಾಡುತ್ತದೆ. ಹೀಗಾಗಿ, ಅಗತ್ಯವಿಲ್ಲ ಎಂದಾದ ಜಮೀನುಗಳನ್ನು ಅಧಿಸೂಚನೆ ವ್ಯಾಪ್ತಿಗೆ ತರದಂತೆ ನೋಡಿಕೊಳ್ಳಬೇಕು’ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಹೈಕೋರ್ಟ್ ಸೂಚಿಸಿದೆ.