ಸರಿ ಮಾಡಿಕೊಳ್ಳುತ್ತೇವೆ: ‘ಬಿ.ಕೆ. ಹರಿಪ್ರಸಾದ್ ಅವರು ನಿಷ್ಠೆ ಮತ್ತು ಶಿಸ್ತಿನ ಮನುಷ್ಯ. ಅತ್ಯಂತ ಹಿರಿಯರು. ಕೆಲವೊಂದು ರಾಜಕೀಯ ಕಾರಣಗಳಿಗೆ ಅವರಿಗೆ ನೋವಾಗಿದೆ. ಮಂತ್ರಿ ಆಗಿಲ್ಲ ಎನ್ನುವುದೊಂದೇ ದೊಡ್ಡದಲ್ಲ. ಸಣ್ಣಪುಟ್ಟ ಏರುಪೇರುಗಳನ್ನು ನಾವು ಮಾತನಾಡಿಕೊಂಡು ಸರಿ ಮಾಡಿಕೊಳ್ಳುತ್ತೇವೆ. ಅವರ ಅನುಭವ, ಸೇವೆ ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ನಾವು, ಹೈಕಮಾಂಡ್ ತೀರ್ಮಾನ ಮಾಡುತ್ತೇವೆ’ ಎಂದರು.