1 ಕೋಟಿ ಸದಸ್ಯತ್ವ: ‘ಅಧ್ಯಕ್ಷರ ಅವಧಿ ಮುಗಿಯುವುದರೊಳಗಾಗಿ 1 ಕೋಟಿ ಜನರಿಗೆ ಕಸಾಪ ಸದಸ್ಯತ್ವ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಅತ್ಯಾಧುನಿಕ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಮನೆಯಲ್ಲಿ ಕುಳಿತೇ ಸದಸ್ಯತ್ವ ಪಡೆಯಲು ಅವಕಾಶ ನೀಡಲಾಗುವುದು. ಪರಿಷತ್ ಸದಸ್ಯತ್ವ ಶುಲ್ಕವನ್ನು ₹ 1 ಸಾವಿರದಿಂದ ₹ 250ಕ್ಕೆ ಇಳಿಸಲಾಗುವುದು. ಕಲಾವಿದರು, ರೈತರು, ಕಾರ್ಖಾನೆಯಲ್ಲಿ ಕೆಲಸ ಮಾಡುವವರು, ಆಟೊ ಚಾಲಕರು ಹೀಗೆ ಎಲ್ಲ ಸ್ತರದ ಜನರಿಗೂ ಸದಸ್ಯತ್ವ ನೀಡಲಾಗುವುದು. ಇದಕ್ಕಾಗಿ ಸದಸ್ವತ್ಯ ಅಭಿಯಾನವನ್ನು ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಬಸ್ ನೀಡುವಂತೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.