ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಹಿನ್ನೆಲೆ ವಿದ್ವಾನ್ ಶೇಷಗಿರಿದಾಸ್ ಅವರ ದಾಸವಾಣಿ ಭಕ್ತರ ಗಮನ ಸೆಳೆಯಿತು.
ಶ್ರೀ ಮಠದ ಆವರಣದಲ್ಲಿರುವ ಯೋಗೀಂದ್ರ ಸಭಾ ಮಂಟಪದಲ್ಲಿ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆಯಂದು ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಶೋಭನಾ ಸ್ವಾಮಿನಾಥನ್ ಅವರಿಂದ ಪಂಚವೀಣಾ ಸಂಗೀತ ಕಾರ್ಯಕ್ರಮ ವಿದ್ವಾನ್ ಶೇಷಗಿರಿ ದಾಸ್ ಅವರ ದಾಸವಾಣಿ ಸಾಧನಾ ಅವರಿಂದ ಓಂಕಾರ್ ನೃತ್ಯ, ನೃತ್ಯ ರೂಪಕ ನೆರೆದಿದ್ದ ಭಕ್ತರ ಗಮನ ಸೆಳೆಯಿತು.